ವಿಟ್ಲ, ಡಿ.05 (DaijiworldNews/PY): ಕ್ರಿಕೆಟ್ ಆಟಗಾರ ಹಾಗೂ ತೀರ್ಪುಗಾರರಾಗಿದ್ದ ವಿಟ್ಲ ರಥಗದ್ದೆಯ ಸಮೀಪದ ನಿವಾಸಿ ರಜನೀಶ್ (39) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಖ್ಯಾತ ಕ್ರೀಡಾಪಟು ಆಗಿದ್ದ ರಜನೀಶ್ ಅವರು ಕ್ರಿಕೆಟ್, ಶಟಲ್, ಬ್ಯಾಡ್ಮಿಂಟನ್, ವಾಲಿಬಾಲ್, ಖೋಖೋ ಆಟಗಾರರಾಗಿದ್ದರು. ಇವರು ಇತ್ತೀಚಿನ ಕೆಲ ವರ್ಷಗಳಿಂದ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದರು.
ವಿಜಿಸಿ ವಿಟ್ಲ ಕ್ರಿಕೆಟ್ ತಂಡ ಪ್ರಧಾನ ಆಟಗಾರರಾಗಿದ್ದ ಇವರು, ಅನೇಕ ವರ್ಷಗಳಿಂದ ಮಂಗಳೂರಿನ ಉರ್ವ ಫ್ರೆಂಡ್ಸ್ ಇದರ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ರಜನೀಶ್ ಅವರ ನಿಧನದ ಕಾರಣಕ್ಕೆ ಇಂದಿನ ಕ್ರಿಕೆಟ್ ಪಂದ್ಯಾಟವನ್ನು ಅರ್ಧಕ್ಕೆ ನಿಲ್ಲಿಸಿದ ಯಂಗ್ ಫ್ರೆಂಡ್ಸ್ ಉರ್ವ ತಂಡ ವಿರುದ್ದ ತಂಡಕ್ಕೆ ಗೆಲುವು ಬಿಟ್ಟುಕೊಟ್ಟಿದ್ದು, ಈ ಮೂಲಕ ಮಾಜಿ ಆಟಗಾರನಿಗೆ ಗೌರವ ಸಲ್ಲಿಸಿದ್ದಾರೆ.