ಉಡುಪಿ, ಡಿ.05 (DaijiworldNews/HR): ಸಿಎಂ ಬದಲಾವಣೆ ಚರ್ಚೆ ವಿಚಾರದಲ್ಲಿ ಭ್ರಮಾಲೋಕದಲ್ಲಿರುವವರಿಗೆ ಉತ್ತರ ಕೊಡಲ್ಲ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ಡಾರೆ.
ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಚರ್ಚೆ ವಿಚಾರವಾಗಿ ಮಾತನಾಡಿದ ಅವರು,ಶಾಸಕಾಂಗ ಪಕ್ಷದ ಸಮ್ಮುಖದಲ್ಲಿ ಒಪ್ಪಿಗೆಯೊಂದಿಗೆ ಬೊಮ್ಮಾಯಿ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಈವರೆಗೂ ಬಸವರಾಜ ಬೊಮ್ಮಾಯಿ ಪಾರದರ್ಶಕವಾಗಿ ಶ್ರದ್ದೆಯಿಂದ ಕೆಲಸ ಮಾಡಿದ್ದು,ಅವರ ಕಾರ್ಯವೈಖರಿಗೆ ವಿಪಕ್ಚಗಳೇ ದಿಗ್ಭ್ರಮೆಗೊಂಡಿವೆ. ಸಿಎಂ ಬದಲಾವಣೆ ಚರ್ಚೆ ವಿಚಾರದಲ್ಲಿ ಭ್ರಮಾಲೋಕದಲ್ಲಿರುವವರಿಗೆ ಉತ್ತರ ಕೊಡಲ್ಲ. ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ" ಎಂದರು.
ರೂಪಾಂತರಿ ಓಮಿಕ್ರಾನ್ ಆತಂಕ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರಕ್ಕೆ ಲಾಕ್ ಡೌನ್ ಚಿಂತನೆ ಇಲ್ಲ. ಮನೆಗಳನ್ನ ಸೀಲ್ ಡೌನ್ ಮಾಡಲಾಗುವುದು. ರೂಪಾಂತರಿ ವೈರಸ್ ಕುರಿತು ಯಾವುದೇ ಆತಂಕ ಬೇಡ" ಎಂದಿದ್ದಾರೆ.
ವಿಧಾನಪರಿಷತ್ ಚುನಾವಣೆ ನಾಮಕಾವಸ್ತೆ! ಕೃಷ್ಣಬೈರೇಗೌಡ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ ಅಣಕಿಸುವುದರಿಂದ ಯಾರ ಗೌರವ ಹೆಚ್ಚುತ್ತೆ? ಚುನಾವಣೆ ನಾಮಕಾವಸ್ತೆ ಆದರೆ ಕೃಷ್ಣ ಬೈರೇಗೌಡ ಯಾಕೆ ಸ್ಪರ್ಧಿಸುತ್ತಾರೆ. ಪ್ರಜಾಪ್ರಭುತ್ವದ ಸೊಬಗಿರುವುದೇ ಈ ಚುನಾವಣೆಯಲ್ಲಿ ಹಾಗಾಗಿ ಜನತಂತ್ರ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಗೌರವಿಸಬೇಕು. ಬಿಜೆಪಿಗೆ ಈ ಚುನಾವಣೆ ನಾಮಕಾವಸ್ತೆಯಲ್ಲ" ಎಂದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೇಗೌಡ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ನಡುವೆ ಹೊಂದಾಣಿಕೆ ಸತ್ಯಕ್ಕೆ ದೂರ. ಪ್ರಧಾನಿ ನರೇಂದ್ರ ಮೋದಿಯವರನ್ನ ಹಿಂದಿನ ಪ್ರಧಾನಿ ದೇವೆಗೌಡರು ಭೇಟಿಯಾಗಿದ್ದಾರೆ. ಹಿರಿಯ ಜೀವ ಎಂಬ ಗೌರವದಿಂದ ಮೋದಿ ಬರಮಾಡಿಕೊಂಡಿದ್ದಾರೆ.ಪ್ರಧಾನಿಯವರ ಕಾರ್ಯವೈಖರಿ ಸಹಜರೀತಿಯಲ್ಲಿ ದೇವೇಗೌಡರು ಗೌರವಿಸಿದ್ದಾರೆ" ಎಂದಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಪ್ರಥಮ ಹಂತದ ಪ್ರಚಾರ ಮುಗಿಸಿದ್ದು, ನಿರೀಕ್ಷೆಗೂ ಮೀರಿದ ಮತಗಳನ್ನ ಪಡೆದು ಗೆಲ್ಲುವ ಭರವಸೆ ಇದೆ. ಮೂರು ಮಂದಿ ಎಂಪಿಗಳು, ಮೂವರು ಮಂತ್ರಿಗಳು ಹಾಗೂ 12 ಎಂಎಲ್ ಎ ಗಳಿರುವ ಕ್ಷೇತ್ರ ನಮ್ಮದು. ಸಂಘಟಿತ ಪ್ರಯತ್ನ ಹಾಗೂ ಕೆಲಸಗಳು ಭೂತ್ ಹಾಗೂ ಗ್ರಾಪಂ ಮಟ್ಟದಲ್ಲಿ ನಡೆದಿದೆ" ಎಂದು ಹೇಳಿದ್ದಾರೆ.