ಕಾರ್ಕಳ, ಡಿ.05 (DaijiworldNews/HR): ಕಾರ್ಕಳ ಉತ್ಸವದಿಂದ ಈ ಪ್ರದೇಶದ ಭವ್ಯತೆಯನ್ನು ವೃದ್ಧಿಸುತ್ತದೆ. ದೇಶ ವಿದೇಶಗಳನ್ನು ಆಕರ್ಷಿಸಲಿದೆ. ಕಾರ್ಕಳ ಐತಿಹಾಸಿಕ ಪರಂಪರೆಗೆ ಹೆಚ್ಚಿನ ಒತ್ತು ದೊರೆಯಲಿದೆ ಎಂದು ನಿಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷ ವಿನಯಹೆಗ್ಡೆ ಹೇಳಿದರು.
ನಗರದ ಸ್ವರಾಜ್ ಮೈದಾನದ ಮುಖ್ಯದ್ವಾರದಲ್ಲಿ ಆರಂಭಗೊಂಡ ಕಾರ್ಕಳ ಉತ್ಸವ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಇತರ ಪಟ್ಟಣಗಳ ಅಭಿವೃದ್ಧಿ ಗಮನಿಸಿದರೆ ಕಾರ್ಕಳ ಮಂದಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ವಿಷಾದನೀಯ. ಕಳೆದ ವರ್ಷಗಳಿಂದ ಕಾರ್ಕಳದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಯು ನಡೆಯುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದಾಗಿ ಕಾರ್ಕಳದ ಕೀರ್ತಿ ಅಂತರರಾಷ್ಟ್ರೀಯ ಮಟ್ಟಕ್ಕೇರಲಿದೆ. ಕಾರ್ಕಳದಲ್ಲಿ ಹಲವಾರು ಸಾಧಕರಿದ್ದು, ಈ ಉತ್ಸವದಿಂದ ಮುಂದಿನ ದಿನಗಳಲ್ಲಿ ಸಚಿವ ವಿ.ಸುನೀಲ್ಕುಮಾರ್ ಅವರು ಹೆಸರು ಗುರುತಿಸಿಕೊಳ್ಳಲಿದೆ" ಎಂದು ಆಶಯ ವ್ಯಕ್ತಪಡಿಸಿದರು.
ಇಂಧನ ಹಾಗೂ ಕನ್ನಡ ಸಂಸಕೃತಿ ಇಲಾಖಾ ಸಚಿವ ವಿ.ಸುನೀಲ್ಕುಮಾರ್ ಮಾತನಾಡಿ, "ಕೊರೊನಾ ಭಯದಿಂದ ದೂರ ಉಳಿದು ಅಭಿವೃದ್ಧಿ ಕಡೆಗೆ ಗಮನ ಹರಿಸುವ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡಿ ಕಾರ್ಕಳ ಉತ್ಸವವು ಉತ್ತೇಜನೆ ಮತ್ತು ಪ್ರೇರತಣಾದಾಯಕವಾಗಿದೆ. ನಾಡಿನ ಪ್ರವಾಸೋದ್ಯಮ, ಕಲೆ,ಶಿಲ್ಪ ಕಲೆ, ನಾಡಿನ ಜನತೆಗೆ ಪರಿಚಯಿಸುವುದಲ್ಲದೇ ಹೊಸ ಮನ್ಮತರಕ್ಕೆ ನಾದಿಯಾಗಲಿದೆ" ಎಂದರು.
ಹತ್ತು ಸಾವಿರ ಕಲಾವಿದರು ಈ ಉತ್ಸವ ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಆಹಾರ ಮೇಳದಲ್ಲಿ ೧೦೦ಕ್ಕೂ ಹೆಚ್ಚು ವೈವಿಧ್ಯ ಖಾದ್ಯಗಳ ಮಳಿಗೆಗಳು ತೆರೆಯಲಿದೆ.೨೫೦ಕ್ಕೂ ಮಿಕ್ಕಿ ವಸ್ತು ಪ್ರದರ್ಶನ ಮಳಿಗೆಗಳು ಇರಲಿದೆ. ಈ ಉತ್ಸವದಿಂದ ಸಾಹಿತ್ಯ ಕ್ಷೇತ್ರಕ್ಕೂ ಹೊಸ ದಿಕ್ಕು ಬರಲಿದೆ.