ಕಾಸರಗೋಡು, ಡಿ.04 (DaijiworldNews/PY): ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದುಮ ಮಾಜಿ ಶಾಸಕ ಕೆ. ಕುಂಞರಾಮನ್ ಸೇರಿದಂತೆ 24 ಮಂದಿ ವಿರುದ್ದ ಸಿಬಿಐ ಎರ್ನಾಕುಲಂ ಸಿ ಜೆ ಎಂ ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ಸಲ್ಲಿಸಿದೆ.
ಕೆ. ಕುಂಞರಾಮನ್ ಅಲ್ಲದೆ ಸಿಪಿಎಂ ಪೆರಿಯ ಸ್ಥಳೀಯ ಸಮಿತಿ ಸದಸ್ಯರಾಗಿದ್ದ ಎ.ಪೀತಾಂಬರನ್ (45), ಸಜಿ ಜೋರ್ಜ್ (40), ಸುಮೇಶ್ (27), ಆಟೋ ಚಾಲಕ ಕೆ.ಅನಿಲ್ ಕುಮಾರ್ (35), ಕೆ ಎಂ ಸುರೇಶ್ (27) ಜಿ .ಜಿಗಿನ್ (26) ಜೀಪು ಚಾಲಕ ಆರ್ . ಶ್ರೀರಾಗ್ (22), ಮೇಲಂಗೋಡ್ನ ಎ. ಅಶ್ವಿನ್ (18), ಸುಬೀಷ್ ( 29), ಎಂ. ಮುರಳಿ (36), ಟಿ. ರಂಜಿತ್ (46), ಪ್ರದೀಪ್ ಯಾನೆ ಕುಟ್ಟನ್ (42), ಬಿ. ಮಣಿಕಂಠನ್, ಸಿಪಿ ಎಂ ಕಾಞಂಗಾಡ್ ವಲಯ ಸಮಿತಿ ಸದಸ್ಯ ಎನ್. ಬಾಲಕೃಷ್ಣನ್, ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಸುರೇಂದ್ರನ್, ಮಧು, ರೆಜಿ ವರ್ಗಿಸ್, ಎ. ಹರಿಪ್ರಸಾದ್, ಪಿ. ರಾಜೇಶ್, ಸಿಪಿಎಂ ಉದುಮ ವಲಯ ಕಾರ್ಯದರ್ಶಿ ರಾಘವನ್, ಸಮಿತಿ ಸದಸ್ಯ ಕೆ. ಭಾಸ್ಕರನ್, ಗೋಪಾಲ್ ವೆಳತ್ತೊಳಿ, ಸಂದೀಪ್ ವೆಳತ್ತೊಳಿ ಮೊದಲಾದವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ .
ಐದು ಸಾವಿರ ಪುಟ ಹೊಂದಿರುವ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಕಳೆದ ಡಿಸೆಂಬರ್ನಲ್ಲಿ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಒಂದು ವರ್ಷದೊಳಗೆ ತನಿಖೆ ನಡೆಸಿ ಆರೋಪ ಪಟ್ಟಿ ತಯಾರಿಸಲಾಗಿದೆ.
ಈ ಹಿಂದೆ ತನಿಖೆ ನಡೆಸಿದ್ದ ಕ್ರೈಂ ಬ್ರಾಂಚ್ ಸಂಗ್ರ ಹಿಸಿದ್ದ ಮಾಹಿತಿಗಳನ್ನು ಇದರಲ್ಲಿ ಸೇರಿಸಲಾಗಿದೆ. ನಾಲ್ವರ ವಿರುದ್ದ ಷಡ್ಯಂತ್ರ, ಕೊಲೆ, ಮಾರಕಾಸ್ತ್ರ ಹಾಗೂ ಸಾಕ್ಷ್ಯ ಮೊದಲಾದ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ 325 ಸಾಕ್ಷಿಗಳಿದ್ದಾರೆ. 200ರಷ್ಟು ದಾಖಲೆಗಳನ್ನು ದೋಷಾರೋಪ ಪಟ್ಟಿ ಜೊತೆ ಇರಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಎ. ಪೀತಾಂಬರನ್ ನೇತೃತ್ವದಲ್ಲಿ ಹತ್ತು ಮಂದಿಯ ತಂಡವು ಇಬ್ಬರನ್ನು ಕೊಲೆಗೈದಿದ್ದು, ಕೊಲೆಗೆ ಮೊದಲು ಎರಡು ಕೇಂದ್ರಗಳಲ್ಲಿ ಮೂರು ಬಾರಿ ಸಂಚು ರೂಪಿಸಿದ್ದರು ಎಂದು ಪಟ್ಟಿಯಲ್ಲಿ ಸೇರಿಸಲಾಗಿದೆ.