ಬಂಟ್ವಾಳ, ಡಿ.04 (DaijiworldNews/PY): ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ಸಭೆ ಬಿ. ಸಿ ರೋಡಿನ ನಾರಾಯಣಗುರು ಮಂದಿರದಲ್ಲಿ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಸಭಾಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂಡರ್ ಹಾಗೂ ಸುದೀಪ್ ಕುಮಾರ್ ಹಾಜರಿದ್ದರು.
ಕೆಪಿಸಿಸಿ ಉಸ್ತುವಾರಿ ಮಮತಾ ಡಿ ಎಸ್ ಗಟ್ಟಿ, ರಮಾನಾಥ ವಿಟ್ಲ, ಚಂದ್ರ ಪ್ರಕಾಶ ಶೆಟ್ಟಿ, ಲುಕ್ಮಾನ್ ಬಂಟ್ವಾಳ, ಎಂ ಎಸ್ ಮಹಮ್ಮದ್, ಬಿ ಹೆಚ್ ಖಾದರ್, ಪ್ರವೀಣ್ ಆಳ್ವ, ಮಲ್ಲಿಕಾ ಪಕ್ಕಳ ಮುಂತಾದವರು ವೇದಿಕೆಯಲ್ಲಿದ್ದರು.