ಮಂಗಳೂರು, ಡಿ 04 (DaijiworldNews/MS): ಕಣ್ಣೂರಿನಿಂದ ಶಾರ್ಜಾಕ್ಕೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನ ಡಿ.೩ ರಂದು ಬೆಳಗ್ಗೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ಕಣ್ಣೂರಿನಿಂದ ಹೊರಟ ಎನ್ ಓ ಐ ಎಕ್ಸ್ -745 ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರೋರ್ವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ವಿಮಾನ ಸಂಚಾರ ಪಥವನ್ನುವನ್ನು ಬದಲಾಯಿಸಿ ತುರ್ತಾಗಿ ಮಂಗಳೂರಿನಲ್ಲಿ ಬೆಳಗ್ಗೆ 10.2ಕ್ಕೆ ಇಳಿಸಲಾಯಿತು.
ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಬಳಿಕ ವಿಮಾನ 11.28ಕ್ಕೆ ಶಾರ್ಜಾಕ್ಕೆ ತೆರಳಿತು. ಜತೆಗಿದ್ದ ಎರಡು ಮಕ್ಕಳು ಸೇರಿದಂತೆ 4 ಮಂದಿ ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿದರು.