ಮಂಗಳೂರು, ಡಿ. 03 (DaijiworldNews/HR): ಚಲಿಸುತ್ತಿದ್ದ ರೈಲಿಗೆ ಸಿಲುಕಿದ ವಿದ್ಯಾರ್ಥಿನಿಯೊಬ್ಬಳನ್ನು ವಿದ್ಯಾರ್ಥಿಯೊಬ್ಬ ರಕ್ಷಿಸಿದ ಘಟನೆ ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ (ಸಂಗ್ರಹ ಚಿತ್ರ)
ವಿದ್ಯಾರ್ಥಿನಿಯೊಬ್ಬಳು ರೈಲು ಹತ್ತಲು ಯತ್ನಿಸಿದಾಗ ಕಾಲು ಜಾರಿ ಹಳಿಗಳ ಮೇಲೆ ಬಿದ್ದಿದ್ದು, ಈ ವೇಳೆ ಮಂಜೇಶ್ವರ ನಿವಾಸಿ ವಿದ್ಯಾರ್ಥಿ ಮನೀಶ್ ಎಂಬಾತ ಆಕೆಯನ್ನು ತಕ್ಷಣ ಹಳಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾನೆ.
ಇನ್ನು ಮನೀಶ್ ಅವರ ಧೈರ್ಯಕ್ಕೆ ರೈಲ್ವೆ ಇಲಾಖೆ ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.