ಉಡುಪಿ, ಡಿ 03 (DaijiworldNews/MS): ಉಡುಪಿ ನಗರಸಭೆ ಅಧಿಕಾರಿಗಳು , ಉಡುಪಿ ನಗರ ಸಂಚಾರಿ ಪೋಲೀಸರ ನೇತೃತ್ವದಲ್ಲಿ ನಗರದಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಅನಧಿಕೃತ ಸಣ್ಣ ಪುಟ್ಟ ಬೀದಿ ಬದಿಯಲ್ಲಿದ್ದ ಅಂಗಡಿಗಳನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಗುರುವಾರ ತೆರವುಗೊಳಿಸಲಾಯಿತು.
ಫುಟ್ಪಾತ್ ಮೇಲೆ ನಿಲ್ಲಿಸಿದ್ದ ವಾಹನಗಳನ್ನು ನಗರ ಸಂಚಾರಿ ಪೊಲೀಸರು ತೆರವು ಮಾಡಿ ಫುಟ್ಪಾತ್ ಮೇಲೆ ನಿಲ್ಲಿಸದಂತೆ ಎಚ್ಚರಿಕೆ ನೀಡಿದರು. ನಗರದ ಸಿಟಿ ಬಸ್ ನಿಲ್ದಾಣ, ಸರ್ವೀಸ್ ಬಸ್ ನಿಲ್ದಾಣದ ಸುತ್ತಮುತ್ತಲಿನಲ್ಲಿ ಪುಟ್ ಪಾತ್ ಮೇಲೆ ಇರಿಸಿದ್ದ ಅಂಗಡಿಯ ಸಾಮಾಗ್ರಿಗಳನ್ನು ತೆರವುಗೊಳಸಿ ದಂಡ ವಿಧಿಸಿದರು.
ನಂತರ ಮಾತನಾಡಿದ ಪೌರಾಯುಕ್ತ ಉದಯ್ ಕುಮಾರ್ ನಗರದಾದ್ಯಂತ ನಿರಂತರ ಕಾರ್ಯಚರಣೆ ನಡೆಸಿ ಅನಧಿಕೃತ ಅಂಗಡಿಗಳನ್ನು, ನಿಯಮ ಪಾಲಿಸಿದ ಅಂಗಡಿಗಳಿಗೆ ದಂಡ ವಿಧಿಸುತ್ತೇವೆ. ಸರಕಾರಿ ರಸ್ತೆಯಲ್ಲಿ ಅಂಗಡಿಯವರು 'ನೋ ಪಾರ್ಕಿಂಗ್ ಬೋರ್ಡ್' ಹಾಕಿದರೆ ದಂಡ ವಿಧಿಸುತ್ತೇವೆ. ಅದನ್ನು ಧಿಕ್ಕರಿಸಿ ಪುನರಾವರ್ತಿಸಿದರೇ ಅಂಗಡಿಯ ಪರವಾನಿಗೆಯನ್ನು ರದ್ದು ಮಾಡುತ್ತೇವೆ. ಮುಂದೆಯೂ ಕಾರ್ಯಾಚರಣೆ ನಿರಂತರವಾಗಿರುತ್ತದೆ ಎಂದರು. ಪ್ಲಾಸ್ಟಿಕ್ ಗಳನ್ನ ಬಳಸುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ನಮ್ಮ ಸ್ವಾಧೀನಪಡಿಸಿಕೊಂಡಿದ್ದೇವೆ" ಎಂದರು .
ಈ ಸಂದರ್ಭದಲ್ಲಿ ಆರ್. ಐ ಧನಂಜಯ್, ನಗರಸಭೆಯ ಕಂದಾಯ ಅಧಿಕಾರಿ, ಕರುಣಾಕರ್ ನಗರಸಭೆ ಆರೋಗ್ಯಾಧಿಕಾರಿ, ಸಂಚಾರಿ ಠಾಣೆ ಪಿ.ಎಸ್.ಐ ಖಾದರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.