ಕಾಸರಗೋಡು, ಡಿ.01 (DaijiworldNews/SM): ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಸೇರಿದಂತೆ ಐವರು ಕಾರ್ಯಕರ್ತರನ್ನು ಸಿಬಿ ಐ ಬಂಧಿಸಿದೆ.
ಮಧು, ರೆಜಿ ವರ್ಗಿಸ್ , ಹರಿಪ್ರಸಾದ್ , ರಾಜು ಮತ್ತು ಸುರೇಂದ್ರನ್ ಬಂಧಿತರು. ಈ ಪೈಕಿ ರಾಜು ಕಾಸರಗೋಡು ಏಚಿಲಡ್ಕ ಬ್ರಾಂಚ್ ಕಾರ್ಯದರ್ಶಿಯಾಗಿದ್ದಾನೆ. ಆರು ತಿಂಗಳ ಹಿಂದೆ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು ಕಾಸರಗೋಡು ಅತಿಥಿಗ್ರಹಕ್ಕೆ ವಿಚಾರಣೆಗೆ ಕರೆಸಿದ್ದ ಸಿಬಿಐ ಸಂಜೆ ಐವರನ್ನು ಬಂಧಿಸಿದ್ದು , ನಾಳೆ ಎರ್ನಾಕುಲಂ ಸಿ ಜೆ ಎಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು.
2019 ರ ಫೆಬ್ರವರಿ 17ರಂದು ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಪೆರಿಯ ಸಮೀಪ ಕಡಿದು ಕೊಲೆ ಮಾಡಿತ್ತು. ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ ನಾಗಿದ್ದ ಪೀತಾಂಬರನ್ ಪ್ರಥಮ ಆರೋಪಿಯಾಗಿರುವ ಈ ಪ್ರಕರಣ ಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ತನಿಖೆ ನಡೆಸಿದ್ದ ಕಾಸರಗೋಡು ಪೊಲೀಸರು ಮತ್ತು ಕ್ರೈಂ ಬ್ರಾಂಚ್ 14 ಮಂದಿಯನ್ನು ಬಂಧಿಸಿತ್ತು.