ಮಂಗಳೂರು, ಡಿ 01 (DaijiworldNews/MS): ಪೂಜೆ ಸಂದರ್ಭದಲ್ಲಿ ಕಲಶಕ್ಕೆ ಇಟ್ಟ ಕರಿಮಣಿ ಸರ ವಾಪಾಸ್ ನೀಡದೆ ಜ್ಯೋತಿಷಿಯೋರ್ವ ಮಹಿಳೆಗೆ ವಂಚಿಸಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಕಷ್ಟವಿದೆ ಎಂಬ ಹಿನ್ನಲೆಯಲ್ಲಿ ಮಹಿಳೆಯೋರ್ವರು ಅ.13 ರಂದು ಕುಂಜತ್ ಬೈಲಿನಲ್ಲಿರುವ ಜ್ಯೋತಿಷಿ ವಿನೋದ್ ಪೂಜಾರಿ ಬಳಿ ಹೋಗಿದ್ದರು. ವಿನೋದ್ , ನಿಮಗೆ ತುಂಬಾ ದೋಷವಿದೆ. ಆ ದೋಷವನ್ನು ಕಳೆಯುವುದಕ್ಕಾಗಿ ಪೂಜೆ ಮಾಡಿಸಿಕೊಡುತ್ತೇನೆ . ಪೂಜೆಯ ಸಮಯ ಕಲಶಕ್ಕೆ ಇಡಲು ಚಿನ್ನದ ಆಭರಣ ತರಬೇಕು ಎಂದಿದ್ದ.ಅದರಂತೆಯೇ ಮಹಿಳೆ ಐದೂವರೆ ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಪೂಜೆಗೆ ನೀಡಿದ್ದರು. ವಿನೋದ್ ಆ ಸರವನ್ನಿಟ್ಟು 15 ದಿನ ಪೂಜೆ ಮಾಡಿ ವಾಪಾಸ್ ನೀಡುವುದಾಗಿ ತಿಳಿಸಿದ್ದ.
ಆದರೆ ಅನಂತರವೂ ನೀಡದ್ ವಂಚಿಸಿ ತಲೆಮರೆಸಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.