ಮಂಗಳೂರು, ನ. 30 (DaijiworldNews/HR): "ಹಿಂದೂ ದೇವರನ್ನು ಅಶ್ಲೀಲವಾಗಿ ಚಿತ್ರಿಸಿ, ಅವಮಾನ ಮಾಡುವ ಷಡ್ಯಂತ್ರವು ನಿರಂತರವಾಗಿ ನಡೆಯುತ್ತಲೇ ಇದ್ದು, ಇದು ಮಿತಿ ಮೀರಿದರೆ ಹಿಂದೂ ಸಮಾಜ ತಕ್ಕ ಪ್ರತ್ಯುತ್ತರ ನೀಡಲಿದೆ" ಎಂದು ವಿಹೆಚ್ ಪಿ ಪ್ರಾಂತ ಸಹಕಾರ್ಯದರ್ಶಿ ಕೃಷ್ಣ ಮೂರ್ತಿ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ದೇವರನ್ನು ಅಶ್ಲೀಲವಾಗಿ ಚಿತ್ರಿಸುವುದನ್ನು ನಿಲ್ಲಿಸಬೇಕು, ಹಲವಾರು ಬಾರಿ ಮನವಿ ಮಾಡಿದರೂ ವ್ಯವಸ್ಥೆಯಾಗಿಲ್ಲ. ಮುಂದಿನ ದಿನಗಳಲ್ಲಿ ಇದಕ್ಕೊಂದು ಅಂತ್ಯ ಹಾಡಬೇಕಿದ್ದು, ಅಂತಹ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಬೇಕು" ಎಂದರು.
"ಸಮಾಜದ ಸ್ವಾಸ್ಥ್ಯ ಕಾಪಾಡಲು ಶಾಂತಿಯಿಂದ ಇದ್ದೇವೆ. ಆದರೆ, ಶಾಂತಿಗೂ ಕೂಡಾ ಒಂದು ಮಿತಿ ಎನ್ನುವಂತದ್ದು ಇದೆ. ಮಿತಿ ಮೀರಿದರೆ ಹಿಂದೂ ಸಮಾಜ ತಕ್ಕ ಪ್ರತ್ಯುತ್ತರ ನೀಡಲಿದೆ" ಎಂದು ಹೇಳಿದ್ದಾರೆ.
ಇನ್ನು ಮಂಗಳೂರು ನಾಗಬನ ದ್ವಂಸ ಕೃತ್ಯದ ಆರೋಪಿಗಳನ್ನು ಬಂಧಿಸಿರುವ ಪೊಲೀಸರನ್ನು ಶ್ಲಾಘಿಸಿದ ಕೃಷ್ಣ ಮೂರ್ತಿ, ಮಂಗಳೂರು ನಾಗ ಬನ ಧ್ವಂಸ ಕೃತ್ಯ ಆರೋಪಗಳನ್ನು ಬಂಧಿಸಿರುವ ಪೊಲೀಸರ ಕಾರ್ಯಾ ಶ್ಲಾಘನೀಯ ಆದ್ರೆ ಈ ಕೃತ್ಯ ಯೋಜಿತ ಜಾಲದಿಂದ ನಡೆದಿದೆ ಮಾತ್ರವಲ್ಲದೆ ಹಿಂದೂಗಳು ನಾಗ ದೇವರನ್ನು ಅತ್ಯಂತ ಶ್ರದ್ದೆ ಭಯ ಭಕ್ತಿಯಿಂದ ನಂಬಿದ್ದಾರೆ ಅಂತಹದರಲ್ಲಿ ಹಿಂದೂ ಗಳು ಈ ಕೃತ್ಯ ನಡೆಸಲು ಸಾಧ್ಯವಿಲ್ಲ" ಎಂದರು.
ಈ ವೇಳೆ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಉಪಾಧ್ಯಕ್ಷ ಸಂಜೀವ ಸೂಟರ್ ಪೇಟೆ, ಜಿಲ್ಲಾ ಸಹಕಾರ್ಯದರ್ಶಿ ರವಿ ಅಸೈಗೋಳಿ, ವಿಭಾಗ ಸಂಯೋಜಕ ಭುಜಂಗ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.