ಮಂಗಳೂರು, ನ 30 (DaijiworldNews/MS): ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಈಗಾಗಲೇ ವೇಳಾಪಟ್ಟಿ ಹೊರಡಿಸಿದ್ದು, ಡಿಸೆಂಬರ್ 10 ರಂದು ಚುನಾವಣಾ ಮತದಾನ ನಡೆಯಲಿದೆ.
ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾಪ್ಟನ್ ಮಣಿವಣ್ಣನ್ ಅವರನ್ನು ಜಿಲ್ಲಾ ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
ಚುನಾವಣೆಯ ಬಗ್ಗೆ ಮಾಹಿತಿ ಪಡೆಯಲು ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು ದಾಖಲಿಸಲು ಪ್ರತೀ ತಾಲೂಕು ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ದೂರುಗಳು ಹಾಗೂ ಮಾಹಿತಿಗಳನ್ನು ಈ ಕೆಳಗಿನ ದೂರವಾಣಿಗಳನ್ನು ಸಂಪರ್ಕಿಸಬಹುದು.
ವಿವರ ಇಂತಿವೆ:
ಮಂಗಳೂರು ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ದೂ.ಸಂ: 0824-2220590, ನಗರದ ತಾಲೂಕು ಕಚೇರಿ ದೂ.ಸಂ: 0824-2220587, ಮೂಡಬಿದ್ರೆ ತಾಲೂಕು ಕಚೇರಿ ದೂ.ಸಂ: 08251-238100, ಬಂಟ್ವಾಳ ತಾಲೂಕು ಕಚೇರಿ ದೂ.ಸಂ: 08255-232124, ಬೆಳ್ತಂಗಡಿ ತಾಲೂಕು ಕಚೇರಿ ದೂ.ಸಂ: 08256-232047, ಪುತ್ತೂರು ತಾಲೂಕು ಕಚೇರಿ ದೂ.ಸಂ: 08251-230349, ಕಡಬ ತಾಲೂಕು ಕಚೇರಿ ದೂ.ಸಂ: 08251-260435, ಸುಳ್ಯ ತಾಲೂಕು ಕಚೇರಿ ದೂ.ಸಂ: 08257-231231 ಆಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.