ಮಂಗಳೂರು, ನ. 28 (DaijiworldNews/SM): ಭಾರತ್ ಅಕಾಡೆಮಿಯು ಮಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ಪ್ರತಿಭಾನ್ವಿತ ಯುವ ಲೇಖಕರ ಪುಸ್ತಕ ಬಿಡುಗಡೆಯೊಂದಿಗೆ ಮೊದಲ ಸಾಹಿತ್ಯೋತ್ಸವವನ್ನು ನಡೆಸಿತು. ದಿಯಾ ಪೈ ಅವರು ಸಂಗ್ರಾಹಿಸಿದ ಕಥೆ ಪುಸ್ತಕ ಯುಎಕ್ಸೆಲ್ ನಿರ್ದೇಶಕರಾದ ಫಿಲ್ಲಿಸ್ ಡಿ'ಕೋಸ್ಟಾ ಕೃತಿ ಬಿಡುಗಡೆ ಕಾರ್ಯ ನೆರವೇರಿಸಿದರು.
ಭಾರತ್ ಸ್ಕೂಲ್ ಟ್ರಸ್ಟ್ನ ಆನಂದ್ ಜಿ ಪೈ ಮತ್ತು ಡಾ ವಿಂಧ್ಯಾ ಪೈ ಲೇಖಕರನ್ನು ಅಭಿನಂದಿಸಿದರು. ಯುವ ಉದ್ಯಮಿಗಳಾದ ಸಂಜೀತ್ ಕ್ಸೇವಿಯರ್ ರೋಡ್ರಿಗಸ್, ಸಮೀಕ್ಷಾ ಶೆಟ್ಟಿ, ಮಿಥುನ್ ಜ್ಯೋತಿಸ್, ಓಶಿನ್ ಪಿರೇರಾ, ಸ್ಟಾಲಿನ್ ಡಿಸೋಜಾ, ತಾಯಿ-ಮಗಳು ಜೋಡಿಯಾದ ತನಿಯಾ ಮತ್ತು ಸೋನಿ ಅವರನ್ನು ಸನ್ಮಾನಿಸಲಾಯಿತು.
ಭಾರತ್ ಅಕಾಡೆಮಿಯ ಪ್ರಾಂಶುಪಾಲರಾದ ಸುರೇಖಾ ಎಂ.ಹೆಚ್., ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಪಠ್ಯಕ್ರಮದ ಪ್ರಾಮುಖ್ಯತೆಯ ಬಗ್ಗೆ ಪೋಷಕರಿಗೆ ಆಸಕ್ತಿದಾಯಕ ವಿಚಾರಗಳನ್ನು ನೀಡಿದರು. ಇದು ಕರಾವಳಿ ಕರ್ನಾಟಕದ ಏಕೈಕ ಶಾಲೆಯಾಗಿದೆ.
ಕಿಡ್ಸ್ ಫ್ಲೀ ಮಾರ್ಕೆಟ್ ಪ್ರಾಂಶುಪಾಲರಾದ ಅಂಜನಾ ಕಾಮತ್, ಮತ್ತು ಖ್ಯಾತ ಸಂಪನ್ಮೂಲ ವ್ಯಕ್ತಿಗಳಾದ ಡಾ ಮಾಲಿನಿ ಹೆಬ್ಬಾರ್, ಭಾರತಿ ಶೇವಗೂರ್, ಪರ್ಪಲ್ ಸ್ಪೇಸ್ನಿಂದ ಪಲ್ಲವಿ ಮತ್ತು ಫಿಲ್ಲಿಸ್ ಡಿಕೋಸ್ಟಾ ಅವರಿಂದ ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು.
ಈ ಫೆಸ್ಟ್ನ ಉದ್ದೇಶವು ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಓದುವಿಕೆಯನ್ನು ಉತ್ತೇಜಿಸುವುದು ಮತ್ತು ಅವರಲ್ಲಿ ಸೃಜನಶೀಲತೆಯನ್ನು ಹುಟ್ಟುಹಾಕುವ ಮೂಲಕ ಉದಯೋನ್ಮುಖ ಲೇಖಕರು, ಕವಿಗಳು ಮತ್ತು ಸಾರ್ವಜನಿಕ ಭಾಷಣಕಾರರಾಗುವುದಾಗಿದೆ.