ಕಾರ್ಕಳ, ನ.28 (DaijiworldNews/PY): "ಇತಿಹಾಸದಲ್ಲಿ ನಿಜಾರ್ಥದಲ್ಲಿ ಎಡಪಂಥೀಯರೂ ಇಲ್ಲ ಬಲಪಂಧೀಯರೂ ಇಲ್ಲ. ಭಾರತದಲ್ಲಿ ಇರುವವರು ಸಮಯಸಾಧಕರು ಮಾತ್ರ. ಚರಿತ್ರೆ ಮತ್ತು ಇತಿಹಾಸ ಬೇರೆ ಬೇರೆ ವ್ಯಾಖ್ಯಾನಗಳನ್ನು ಹೊಂದಿದೆ. ಇತಿಹಾಸ ಏನೆಲ್ಲ ಯಥಾರೀತಿಯಲ್ಲಿ ನಡೆದಿದೆ. ಚರಿತ್ರೆ ಕಥನ ನಿರೂಪಣ ಜೊತೆಗೆ ಮೌಲ್ಯಯುಕ್ತ ವಿಚಾರಗಳನ್ನು ಪ್ರಸ್ತುತ ಪಡಿಸುತ್ತದೆ. ಘಟನಾವಳಿಯನ್ನು ಯಥಾವತ್ತಾಗಿ ನಿರೂಪಿಸುವುದೇ ಇತಿಹಾಸ" ಎಂಬುದಾಗಿ ಸಾಹಿತಿ, ಚಿಂತಕ ಅರವಿಂದ ಚೊಕ್ಕಾಡಿ ಅಭಿಮತ ವ್ಯಕ್ತಪಡಿಸಿದರು.
ಹೋಟೆಲ್ ಪ್ರಕಾಶ್ನ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಕಳ ಸಾಹಿತ್ಯ ಸಂಘದ ಬೆಳ್ಳಿಹಬ್ಬ ವರುಷ-ಹರುಷ ಕಾರ್ಯಕ್ರಮದಲ್ಲಿ ಭಾರತೀಯ ಇತಿಹಾಸದ ಮರುರಚನೆಯ ಅಗತ್ಯ ಕುರಿತು ಮಾತನಾಡಿದರು.
ಕಾರ್ಕಳ ಸಾಹಿತ್ಯ ಸಂಘದ ಕಾರ್ಯಧ್ಯಕ್ಷ ಕೆ.ಪಿ.ಶೆಣೈ ಸ್ವಾಗತಿಸಿದರು. ಗೌರವಧ್ಯಕ್ಷ ತುಕಾರಾಮ ನಾಯಕ್ ಅತಿಥಿಗಳನ್ನು ಗೌರವಿಸಿದರು. ವೃಂದಾ ಹರಿಪ್ರಕಾಶ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಪಿಎಚ್ಡಿ ಪದವಿಗಳಿಸಿದ ಸಂಘದ ಸದಸ್ಯೆ ವಿಜಯಕುಮಾರಿ ಅವರನ್ನು ಸನ್ಮಾನಿಸಲಾಯಿತು.
ವೈ. ಅನಂತಪದ್ಮನಾಭ ಭಟ್, ದಿನೇಶ್ ಆಚಾರ್ ಮಸ್ಕತ್ ಭಾಗವಹಿಸಿದರು.
ಪ್ರಧಾನ ಕಾರ್ಯದರ್ಶಿ ಬಿ.ಪದ್ಮನಾಭ ಗೌಡ ವಂದಿಸಿದರು. ಜ್ಯೋತಿ ಸುನೀಲ್ಕುಮಾರ್ ಶೆಟ್ಟಿ ನಿರ್ವಹಿಸಿದರು.