ಕಾರ್ಕಳ, ನ. 28 (DaijiworldNews/HR): ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ, ಆಹಾರ ಪದ್ಧತಿ ಪ್ರತಿಬಿಂಬಿಸುವ ಕಾರ್ಕಳ ಉತ್ಸವವು ದೇಶಕ್ಕೆ ಮಾದರಿ ಉತ್ಸವವಾಗಲಿ. ಕನ್ನಡದೊಂದಿಗೆ ಇತರ ಸ್ಥಳೀಯ ಭಾಷೆಗಳ ಸಾಹಿತ್ಯ,ಸಂಗೀತವನ್ನು ಪರಿಚಯಿಸಬೇಕಂಬ ನಿಟ್ಟಿನಲ್ಲಿ ಡಿ.18ರಿಂದ 26ರ ತನಕ ಕಾರ್ಕಳ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಹೇಳಿದರು.
ನಗರದ ಮಂಜುನಾಥ ಪೈ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಕಳ ಉತ್ಸವ-2021 ಇದರ ಪೂರ್ವಭಾವಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಾರ್ಕಳ ಉತ್ಸವದ ಮೂಲಕ ಕ್ಷೇತ್ರದ ಸರ್ವಾಗೀಣ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಸ್ವರ್ಣ ಕಾರ್ಕಳ ಕಲ್ಪನೆಗೆ ಬುನಾದಿಯಾಗುತ್ತದೆ. ಕಾರ್ಕಳ ಕ್ಷೇತ್ರೆವನ್ನು ರಾಜ್ಯಕ್ಕೆ ತೋರ್ಪಡಿಸುವ ಪ್ರಯತ್ನ ಇದಾಗಿರುತ್ತದೆ. ಕಾರ್ಕಳ ಬೆಳೆಯುವುವಲ್ಲಿ ಅನೇಕರ ಕೊಡುಗೆ ಇದೆ. ಅದರಲ್ಲಿ ಕವಿ ಮುದ್ದಣ್ಣ, ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿ ಜಿನರಾಜ ಹೆಗ್ಡೆ, ಶಿಲ್ಪ ಕಲೆಯಲ್ಲಿ ಪ್ರಸಿದ್ಧರಾದ ರೆಂಜಾಳ ಗೋಪಾಲಕೃಷ್ಣ ಶೆಣೈ, ಸಾಹಿತಿ ಕ್ಷೇತ್ರದಲ್ಲಿ ಸಾಧನೆಗೈದ ಎಂ.ವೀರಪ್ಪ ಮೊಯಿಲಿ, ಕನ್ನಡ ಸಾಹಿತ್ಯ ಸಂಘಟನೆಯನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರೋ.ಎಂ.ರಾಮಚಂದ್ರ, ಡಾ.ನಾ.ಮೊಗಸಾಲೆ ಸೇರಿದಂತೆ ಆನೇಕರಿದ್ದಿದ್ದಾರೆ. ಅವರೆಲ್ಲರೂ ಹಾಕಿ ಕೊಟ್ಟ ಭವ್ಯ ಪರಂಪರೆಯನ್ನು ಬೆಳೆಸುವ ಸುದುದ್ದೇಶ ಈ ಕಾರ್ಯಕ್ರಮದಾಗಿದೆ" ಎಂದರು.
"ಕಾರ್ಕಳವನ್ನು ರಾಜ್ಯವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಪ್ರಮುಖ ತಾಣಗಳಿವೆ. ವರಂಗ ಬಸದಿ, ಕಾರ್ಕಳ ಗೊಮ್ಮಟಬೆಟ್ಟ, ಹಿರಿಯಂಗಡಿ ಮಾನಸ್ತಂಭ,ಬಸದಿ, ಚತುರ್ಮುಖ ಬಸದಿ, ಆನೆಕೆರೆ ಬಸದಿ, ಅನಂತಪದ್ಮನಾಭ, ಪರುತಿರುಪತಿ ವೆಂಕಟರಮಣ, ಇಕ್ಕೇರಿ ರಾಜನ ಕಾಲಘಟ್ಟದ ಮಾರಿಯಮ್ಮ ಶ್ರೀ ಕ್ಷೇತ್ರ, ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ, ಸಾಣೂರು ದರ್ಗಾ, ಕೋಟಿ ಚೆನ್ನಯ್ಯ ಥ್ರೀ ಪಾರ್ಕ್ ಸೇರಿದಂತೆ ಕಾರ್ಕಳದ ಹಲವು ಮಗ್ಗಲನ್ನು ಪರಿಚಯಿಸುವ ಉದ್ದೇಶ ಕಾರ್ಕಳ ಉತ್ಸವದಾಗಿದೆ" ಎಂದಿದ್ದಾರೆ.
ಗೂಡುದೀಪ ಪ್ರದರ್ಶನ, ಗಾಳಿಪಟ ಪ್ರದರ್ಶನ ಮತ್ತು ವಿಜ್ಞಾನ ಸಿರಿ ವಿಜ್ಞಾನ ಪ್ರದರ್ಶನ, ಹಲವು ಉಪವೇದಿಕೆಗಳಲ್ಲಿ ಹೊರರಾಜ್ಯದ ಕಲಾವಿದರ ತಂಡಗಳ ಸಂಗೀತ. ವೃತ್ಯ ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಪ್ರದರ್ಶನ. ಕರಕುಶಲ ವಸ್ತು ಪ್ರದರ್ಶನ, ಶಿಲ್ಪಕಲೆ ಹಾಗೂ ಚಿತ್ರಕಲೆಗಳ ಚಿತ್ರ ಸಂತೆ, ವಿವಿಧ ದೇಸಿ ತಿನಿಸು ಖಾದ್ಯಗಳ ಆಹಾರೋತ್ಸವವು ಒಳಗೊಂಡಿರುತ್ತದೆ.
ಡಿಸೆಂಬರ್ 24,25ರಂದು ಅವಿಭಜಿತ ಕಾರ್ಕಳ ತಾಲೂಕಿನ ಮನೆಗಳಲ್ಲಿ ದೀಪಾಲಂಕಾರ ಬೆಳಗಿಸಿಸಬೇಕು. ಪಕ್ಷಾತೀತ, ಧರ್ಮಾತೀತ, ಭಾಷಾಂತೀತ ನೆಲೆಯಲ್ಲಿ ಕಾರ್ಕಳ ಉತ್ಸವಕ್ಕೆ ಸರ್ವರ ಬೆಂಬವನ್ನು ಕೋರಿದರು.
ಜ್ಞಾನಸುದ್ಧಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮಾತನಾಡಿ, ಕರೋನಾ ಸಂಕಷ್ಟದಿಂದಾಗಿ ಜನಜೀವ ಮೇಲೆ ದುಷ್ಪರಿಣಾಮ ಬೀರಿದಂತು ನಿಜ. ಈ ಸಂದರ್ಭದಲ್ಲಿ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಉತ್ಸವ ಕಾರ್ಯಕ್ರಮದಿಂದ ಜನಜೀವನದಲ್ಲಿ ಉತ್ಸಾಹತೆ ಹೆಚ್ಚಿಸುತ್ತದೆ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಆರ್ಥಿಕತೆ ಚಲಾವಣಿಗೆ ಪೂರಕವಾಗುತ್ತದೆ. ಆತ್ಮಸೈರ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ.
ಕೊಂಕಣಿ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ, ಸಾಹಿತಿ ರೆಂಜಾಳ ಮುನಿರಾಜ ರೆಂಜಾಳ ಮೊದಲಾದವರು ಸಂದಭೋಚಿವಾಗಿ ಮಾತನಾಡಿದರು. ಪಳ್ಳಿ ಅಡಪ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಪುಂಡಳಿಕ ಮರಾಠೆ, ಸಾಹಿತಿ ವಿಠಲ ಶೆಟ್ಟಿ ಬೇಲಾಡಿ, ಉದ್ಯಮಿ ಅಶೋಕ್ ಅಡ್ಯಾಂತಾಯ, ಪ್ರೋ.ಗುಣಪಾಲಕಡಂಬ, ಹರಿಶ್ಚಂದ್ರ ಕಾಬೆಟ್ಟು, ಸಂಜೀವ ಜೋಗಿ,ಕೆ.ಪಿ ಶೆಣೈ, ಜೀವಂಧರ್ ಅಡ್ಯಾಂತಾಯ, ಭಾಸ್ಕರ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.