ಮಂಗಳೂರು, ನ. 27 (DaijiworldNews/HR): ನಾಗಬನ ಅಪವಿತ್ರ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಇಲಾಖೆಯನ್ನು ನಗರ ಉತ್ತರ ಶಾಸಕ ಡಾ.ಭರತ್ ವೈ ಶೆಟ್ಟಿ ಅಭಿನಂದಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಕರಣವನ್ನು ಭೇದಿಸಿದ ಪೊಲೀಸ್ ಇಲಾಖೆಗೆ ಹಾಗೂ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆಗೆ ಧನ್ಯವಾದಗಳು" ಎಂದರು.
"ಚುನಾವಣೆ ಹತ್ತಿರ ಬರುವ ಸಂಧರ್ಭ ಈ ಘಟನೆಗಳು ನಡೆಯುತ್ತಿದ್ದು, ಇದರಲ್ಲಿ ರಾಜಕೀಯ ಪಿತೂರಿಗಳಿವೆ. ಕೇಂದ್ರ ರಾಜ್ಯದಲ್ಲಿ ಬಿಜೆಪಿ ಅಭಿವೃದ್ಧಿ ಯಾವುದೇ ರಾಜೀ ಮಾಡಿಲ್ಲ.
ನಮ್ಮ ಅಭಿವೃದ್ಧಿ ಕಾರ್ಯಗಳಿಂದ ರಾಜಕೀಯವಾಗಿ ನಮ್ಮನ್ನು ಏನೂ ಮಾಡಲು ಆಗಿಲ್ಲ.
ಈ ಕಾರಣದಿಂದ ಈ ರೀತಿಯ ಕೃತ್ಯಗಳ ಮೂಲಕ ಹುನ್ನಾರ ಮಾಡ್ತಾ ಇದ್ದಾರೆ" ಎಂದರು.
ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮುಂಬರುವ ಎಂಎಲ್ಸಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.