ಕಾಸರಗೋಡು, ನ. 27 (DaijiworldNews/HR): ಕೇರಳ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾಸರಗೋಡು ಜಿಲ್ಲೆಯ ಪ್ರತಿಭಾವಂತ ಮಕ್ಕಳನ್ನೊಳಗೊಂಡ ತಂಡದ ಸ್ಮೃತಿ ಯಾತ್ರೆಯು ಶನಿವಾರ ಮಂಜೇಶ್ವರ ಗೋವಿಂದ ಪೈಗಳ ನಿವಾಸವಾದ ಗಿಳಿವಿಂಡು ವಿನಿಂದ ಚಾಲನೆ ನೀಡಲಾಯಿತು.
ಯಾತ್ರೆಗೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ ಅಧ್ಯಕ್ಷತೆ ವಹಿಸಿದ್ದರು.
ಗೋವಿಂದ ಪೈ ಸ್ಮಾರಕ ಕಾರ್ಯದರ್ಶಿ ಕೆ .ಆರ್ ಜಯಾನಂದ ಪ್ರಮುಖ ಭಾಷಣ ಮಾಡಿದ್ದು, ಸರ್ವ ಶಿಕ್ಷ ಕೇರಳ ರಾಜ್ಯ ಮುಖ್ಯಸ್ಥ ಪಿ. ರವೀಂದ್ರನ್, ಶಿಕ್ಷಣಾಧಿಕಾರಿ ಇ . ನಂದಿಕೇಶನ್, ಎನ್. ಎಸ್. ಎಸ್ ಯೋಜನಾಧಿಕಾರಿ ಹರಿ, ಪಿ. ಮೋಹನಂ. ಆಗಸ್ಟಿನ್ ಬರ್ನಾಡ್, ಕೆ. ಶ್ರೀಧರನ್, ಗಣೇಶ್, ಡಯೆಟ್ ಪ್ರತಿನಿಧಿಗಳಾದ ವಿನೋದ್ ಕುಮಾರ್, ನಾರಾಯಣನ್, ಗಿರೀಶ್ ಬಾಬು, ಶಿಕ್ಷಣ ಸಂರಕ್ಷಣಾ ಅಭಿಯಾನದ ಜಿಲ್ಲಾ ಸಂಯೋಜಕ ಪಿ . ದಿಲೀಪ್ ಕುಮಾರ್, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ವಿ. ದಿನೇಶ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಸ್ಮೃತಿ ಯಾತ್ರೆಯು ಬಳಿಕ ಕಾರಡ್ಕ, ಉಬೈದ್ ಸ್ಮಾರಕ ತಳಂಗೆರೆ, ಬೇಕಲ ಕೋಟೆ, ವೆಳ್ಳಿಕೋತ್ ಸಂಚರಿಸಿ ಅಲ್ಲಿನ ಚರಿತ್ರೆಯನ್ನು ತಿಳಿದು ಮೊದಲ ದಿನದ ಯಾತ್ರೆ ಮುಕ್ತಾಯ ಗೊಂಡಿದ್ದು, ನಾಳೆ ಮಾಂದೋಪ್ ಮೈದಾನದಿಂದ ಆರಂಭಿಸಿ ಎ.ಸಿ ಕಣ್ಣನ್ ನಾಯರ್ ಸ್ಮಾರಕ, ಏಚಿಕ್ಕಾನ ತರವಾಡು, ನೀಲೇಶ್ವರ ರಾಜಾಸ್ ಶಾಲೆ, ಕುಟ್ಟಮತ್, ಪಿಲಿಕೋಡ್ ಭವನ ಸಂದರ್ಶನ ಮಾಡಿ ಕಯ್ಯೂರು ನಲ್ಲಿ ಸಮಾಪಣೆ ಗೊಳ್ಳಲಿದೆ.