ಕಾಸರಗೋಡು, ನ.27 (DaijiworldNews/PY): ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಸುಮಾರು 128 ಕಿಲೋ ಗಾಂಜಾವನ್ನು ಆದೂರು ಪೊಲೀಸರು ಮತ್ತು ನಾರ್ಕೋಟಿಕ್ ತಂಡ ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಕಾಸರಗೋಡು ವಿದ್ಯಾನಗರದ ಝುಬೈರ್ ಬಂಧಿತ.
ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ತಂಡವು ಆದೂರು ಸಮೀಪದಿಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಪ್ಯಾಕೆಟ್ಗಳಾಗಿ ಗಾಂಜಾವನ್ನು ಕಾಸರಗೋಡಿಗೆ ಸಾಗಾಟ ಮಾಡಲಾಗುತ್ತಿತ್ತು. ಆಂಧ್ರಪ್ರದೇಶದಿಂದ ತಲುಪಿದ ಗಾಂಜಾವು ಕಾಸರಗೋಡಿನ ವಿವಿಧೆಡೆಗೆ ಸರಬರಾಜು ಮಾಡಲು ತರಲಾಗುತ್ತಿತ್ತು ಎನ್ನಲಾಗಿದೆ.
ಗುರುವಾರ ಸಂಜೆ ಮಂಗಳೂರು ಮೂಲಕ ಕಾಸರಗೋಡಿಗೆ ತರಲಾಗುತ್ತಿದ್ದ 114 ಕಿಲೋ ಗಾಂಜಾವನ್ನುಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದರು.
ಗಾಂಜಾವನ್ನು ಆಂಧ್ರ ಪ್ರದೇಶ ದಿಂದ ತರಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚಟ್ಟಂಗುಯಿಯ ಅಜ್ಮಲ್ ಎಂಬಾತನನ್ನು ಬಂಧಿಸಲಾಗಿತ್ತು.