ಸುರತ್ಕಲ್, ನ 27 (DaijiworldNews/MS): ಕೂಳೂರು ಮತ್ತು ಕೋಡಿಕಲ್ ನಾಗಬನಗಳಲ್ಲಿ ಅಲ್ಲಿನ ಆರಾಧನಾ ನಾಗನ ಕಲ್ಲುಗಳನ್ನು ಭಗ್ನಗೊಳಿಸಿ ಎಸೆದು ಕೋಮು ಸೌಹಾರ್ಧತೆ ಕದಡಲು ಸಂಚು ಹೂಡಿರುವುದು ಬಯಲಾಗಿದ್ದು, ಆರೋಪಿಗಳ ಸುಳಿವು ಪೊಲೀಸರಿಗೆ ದೊರೆತಿದೆ.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಇಂದು ಶಾಂತಿಯುತವಾಗಿದ್ದು ,ಜಿಲ್ಲೆಯಲ್ಲೂ ಯಾವುದೇ ಅಹಿತಕರ ಘಟನೆ ಗೆ ನಮ್ಮ ಸರಕಾರ ಆಸ್ಪದ ನೀಡಿಲ್ಲ. ಹೀಗಾಗಿ ಶಾಂತಿ ಸಾಮರಸ್ಯ ವಾತಾವರಣ ಕೆಡಿಸಿ ಬಿಜೆಪಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಸಂಚು ಇದಾಗಿದೆ. ಈ ಕೃತ್ಯ ಎಸಗಿದವರ ಹಿಂದೆ ಇರುವ ಸಂಘಟನೆ ,ವ್ಯಕ್ತಿಗಳ ಮೇಲೂ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಡಾ.ಭರತ್ ಶೆಟ್ಟಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.