ಮಂಗಳೂರು, ನ.26 (DaijiworldNews/HR): ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳ ಗಂಗೋತ್ರಿ (ಮಾಮ್) ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆದಿದ್ದು, ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮಾಮ್ ನೂತನ ಅಧ್ಯಕ್ಷರಾಗಿ ನವೀನ್ ಅಮ್ಮೆಂಬಳ ಅವರು ಸರ್ವಾನುಮತದಿಂದ ಆಯ್ಕೆಯಾದರು. ಅಲ್ಲದೆ ಗೌರವಾಧ್ಯಕ್ಷರಾಗಿ ವೇಣು ಶರ್ಮ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಸಫಿಯಾ, ಕೋಶಾಧಿಕಾರಿಯಾಗಿ ಕೃಷ್ಣ ಕಿಶೋರ್, ಉಪಾಧ್ಯಕ್ಷರಾಗಿ ಚಂದ್ರಶೇಖರ ಕುಳಮರ್ವ, ಕಾರ್ಯದರ್ಶಿಗಳಾಗಿ ಹರೀಶ್ ಮೋಟುಕಾನ ಮತ್ತು ಪ್ರಶಾಂತ್ ಸುವರ್ಣ, ಕಾರ್ಯಕ್ರಮ ಸಂಯೋಜಕರಾಗಿ ತಾರಾ ಆಯ್ಕೆಯಾದರು.
ಇನ್ನುಳಿದಂತೆ ಮಾಮ್ ಇನ್ಸ್ಪೈರ್ ಅವಾರ್ಡ್ ಸಂಚಾಲಕರಾಗಿ ಶರತ್ ಹೆಗ್ಡೆ ಕಡ್ತಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೇಣು ವಿನೋದ್ ಕೆ.ಎಸ್., ಸುರೇಶ್ ಪುದುವೆಟ್ಟು, ಕೃಷ್ಣ ಮೋಹನ ತಲೆಂಗಳ, ಸುರೇಶ್ ಡಿ. ಪಳ್ಳಿ, ಹರೀಶ ಕುಲ್ಕುಂದ, ವಿನೋದ್ ರಾಜ್ ಕೆ., ಮೇಘಲಕ್ಷ್ಮೀ, ಸಂತೋಷ್ ವರ್ಕಾಡಿ, ಅಹಮದ್ ಬಾವಾ, ಮಹಾಂತೇಶ್ ಹಿರೇಮಠ, ರಾಜೇಶ್ ಫೆರಾವೊ, ಧೀರಜ್ ಪೊಯ್ಯೆಕಂಡ ಆಯ್ಕೆಯಾಗಿದ್ದಾರೆ.