ಉಡುಪಿ, ನ 26 (DaijiworldNews/MS): ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ನ.25ರ ಗುರುವಾರದಂದು ಪರಾರಿಯಾಗಿದ್ದ ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಯನ್ನು ಶುಕ್ರವಾರ ನ.26ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ
ನ.25 ರಂದು ಎರಡು ನಂಬರ್ ಪ್ಲೇಟ್ ಹೊಂದಿದ್ದ ಲಾರಿಯೊಂದು ಟ್ರಿಪ್ ಶೀಟ್ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಪತ್ತೆ ಹಚ್ಚಿ ಪೊಲೀಸ್ ಹಾಗೂ ಗಣಿ ಇಲಾಖೆ ದೂರು ನೀಡಿದ್ದರು.
ಘಟನೆಯ ವಿವರ:
ಕೊರಂಗ್ರಪಾಡಿ-ಅಲೆವೂರು ರಸ್ತೆಯಲ್ಲಿ ಲಾರಿಯೊಂದು ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಲಾರಿ ಮಾಲಕರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ನಗರ ಠಾಣೆಗೆ ಕರೆ ಮಾಡಿ ಗುರುವಾರ ಬೆಳಗ್ಗೆ ಮಾಹಿತಿ ನೀಡಿದ್ದಾರೆ. ನಗರ ಪೊಲೀಸ್ ಠಾಣೆಯ ಸಿಬ್ಬಂದಿಯೂ ಮಾನಸ ಬಸ್ ನಿಲ್ದಾಣದ ಬಳಿ ಬಂದಾಗ, ಟಿಪ್ಪರ್ ಲಾರಿ ನಿಲ್ಲಿಸಿರುವುದನ್ನು ಮತ್ತು ಐದಾರು ಜನರು ಚಾಲಕನೊಂದಿಗೆ ಮಾತನಾಡುತ್ತಿರುವುದನ್ನು ನೋಡಿ ಪರಿಶೀಲಿಸಿದಾಗ ಲಾರಿಯಲ್ಲಿ ಕೆಎ 19 ಡಿ 1684 ಮತ್ತು ಕೆಎ 19 ಡಿ 1685 ರ ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡು ವಿಭಿನ್ನ ನೋಂದಣಿ ನಂಬರ್ ಪ್ಲೇಟ್ಗಳನ್ನು ಹೊಂದಿದ್ದು, ವಾಹನದಲ್ಲಿ ಮರಳು ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ. ಚಾಲಕನು ವಿಚಾರಣೆ ನಡೆಸಿದಾಗ ಆತನ ಹೆಸರು ಬಾಗಲಕೋಟೆ ಮೂಲದ ಯಲ್ಲಪ್ಪ ಜಾಲಾಪುರ ಎಂದು ತಿಳಿಸಿದ್ದಾನೆ. ಲಾರಿ ಚಾಲಕನೊಂದಿಗೆ ಸಾರ್ವಜನಿಕರು ವಾಗ್ವಾದ ನಡೆಸುತ್ತಿದ್ದಾಗ, ಪೊಲೀಸ್ ಪೇದೆ ಟಿಪ್ಪರ್ ಅನ್ನು ಠಾಣೆಗೆ ತರುವಂತೆ ಚಾಲಕನಿಗೆ ತಿಳಿಸಿದ್ದರು.ಆದರೆ ಲಾರಿ ಚಾಲಕ ಪೇದೆಯ ಕೊರಳಪಟ್ಟಿ ಎಳೆದು ತಳ್ಳಿ ಅಲೆ ಪಡವೂರಿಗೆ ವಾಹನ ತೆಗೆದುಕೊಂಡು ಹೋಗಿ ಪರಾರಿಯಾಗಿದ್ದಾನೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.