ಮಂಗಳೂರು, ನ 26 (DaijiworldNews/MS): ವಾಮಂಜೂರು ಉಳಾಯಿಬೆಟ್ಟು ಪರಾರಿಯ ಟೈಲ್ಸ್ ಫ್ಯಾಕ್ಟರಿಯಲ್ಲಿ ೮ ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಆರೋಪಿಗಳನ್ನು 4 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಆರೋಪಿಗಳಾದ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಜಾಯ್ಬನ್ ಸಿಂಗ್ ( 21 ) ಮುಖೇಶ್ ಸಿಂಗ್ (20 ) ಜಾರ್ಖಂಡ್ ನ ರಾಂಚಿಯ ಮನೀಶ್ ತಿರ್ಕಿ (33 ) ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಮುನೀಂ ಸಿಂಗ್ ( 20) ಬಂಧಿತರು.
ಆರೋಪಿಗಳು ನ, ೨೧ ರಂದು ಆಟವಾಡುತ್ತಿದ್ದ ಬಾಲಕಿಯನ್ನು ಹಾಡಹಗಲೇ ಎಳೆದೊಯ್ದಿದ್ದು ಲೈಂಗಿಕ ದೌರ್ಜನ್ಯ ಎಸಗಿದ್ದು , ಪ್ರಕರಣ ಬಯಲಾಗುವ ಭಯಲಾಗುವ ಭೀತಿಯಿಂದ ಕತ್ತು ಹಿಸುಕಿ ಕೊಲೆ ಮಾಡಿ ಚರಂಡಿಯಲ್ಲಿ ಎಸೆದುಹೋಗಿದ್ದರು.ಈ ಪ್ರಕರಣ ಕರಾವಳಿಯಾದ್ಯಂತ ಸಂಚಲನ ಮೂಡಿಸಿತ್ತು.
ಮಂಗಳೂರು: ಕಾಮುಕರ ಪೂರ್ವಯೋಜಿತ ಸಂಚಿಗೆ ಬಾಲಕಿ ಬಲಿ - ನಾಲ್ವರು ಆರೋಪಿಗಳು ಅರೆಸ್ಟ್