ಕಾಸರಗೋಡು, ನ 26 (DaijiworldNews/MS): ಗ್ರಾಮ ಕಚೇರಿಗಳಲ್ಲಿ ವಿಲೇವಾರಿಯಾಗದೆ ಉಳಿದಿರುವ ಕಡತಗಳನ್ನು ಡಿಸೆಂಬರ್ ನಲ್ಲಿ ನಡೆಯಲಿರುವ ಗ್ರಾಮ ಮಟ್ಟದ ಅದಾಲತ್ ನಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ಕೇರಳ ಕಂದಾಯ ಹಾಗೂ ವಸತಿ ಸಚಿವ ಕೆ . ರಾಜನ್ ಅಭಿಪ್ರಾಯಪಟ್ಟರು.
ಅವರು ಗುರುವಾರ ಕುಂಬ್ಡಾಜೆ ಯಲ್ಲಿ ಸ್ಮಾರ್ಟ್ ಗ್ರಾಮ ಕಚೇರಿ ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದ 1,666 ಗ್ರಾಮ ಕಚೇರಿಗಳಲ್ಲಿ ಅದಾಲತ್ ನಡೆಸಲಾಗುತ್ತಿದೆ. ರಾಜ್ಯ ಸಚಿವಾಲಯದಿಂದ ಆರಂಭಿಸಿ ಗ್ರಾಮ ಮಟ್ಟ ತನಕ ಅದಾಲತ್ ನಡೆಸುವ ಗುರಿ ರಾಜ್ಯ ಸರ್ಕಾರದ್ದಾಗಿದೆ ಎಂದು ಹೇಳಿದರು.
ಎಲ್ಲಾ ಭೂರಹಿತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು. ಶಾಸಕ ಎನ್ . ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ , ಕುಂಬ್ಡಾಜೆ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸಳಿಗೆ , ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಜಾ ಭಟ್, ಕಾರಡ್ಕ ಬ್ಲಾಕ್ ಪಂಚಾಯತ್ ಸದಸ್ಯೆ ಕೆ . ನಳಿನಿ , ಪಂಚಾಯತ್ ಸದಸ್ಯ ಹರೀಶ್ ಗೋಸಾಡ , ರಾಜಕೀಯ ಪಕ್ಷಗಳ ಮುಖಂಡರಾದ ಟಿ . ಎನ್ . ನಂಬ್ಯಾರ್ , ಕೆ .ವಾರಿಜಾಕ್ಷನ್ , ಮುಹಮ್ಮದ್ ಸಾಲಿ , ದಾಮೋದರ ಬೆಳ್ಳಿಗೆ ಎಂ .ಟಿ ಚಾಕೋ ಮೊದಲಾದವರು ಮಾತನಾಡಿದರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಸ್ವಾಗತಿಸಿ , ಕಂದಾಯ ಧಿಕಾರಿ ಅತುಲ್ ಎಸ್ . ನಾಥ್ ವಂದಿಸಿದರು