ಕಾರ್ಕಳ, ನ.25 (DaijiworldNews/HR): ನಗರದ ಹನುಮಾನ್ ಪೆಟ್ರೋಲ್ ಬಂಕ್ ಬಳಿಯಲ್ಲಿರುವ ನಾಗರ ಬಾವಿಗೆ ಬಿದ್ದ ವೃದ್ಧೆಯೊಬ್ಬರು ಸಾವಿಗೀಡಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಮೃತಪಟ್ಟವರನ್ನು ದಾನಸಾಲೆಯ ನಿವಾಸಿ ಗೌರಮ್ಮ(65) ಎಂದು ಗುರುತಿಸಲಾಗಿದೆ.
ಎಂದಿನಂತೆ ವಾಕಿಂಗ್ ಮಾಡಲೆಂದು ಮನೆಯಿಂದ ಹೊರಟು ಹೋದವರು ಹಿಂತಿರುಗದಿದ್ದಾಗ ಅವರನ್ನು ಹುಡುಕಾಡಿದಾಗ ಹನುಮಾನ್ ಪೆಟ್ರೋಲ್ ಬಂಕ್ ಬಳಿಯ ನಾಗರಬಾವಿಯಲ್ಲಿ ಅವರ ಮೃತದೇಹ ಪತ್ತೆಯಾಗಿರುತ್ತದೆ.
ಈ ಬಗ್ಗೆ ನಗರ ಠಾಣೆಯಲ್ಲಿ ಕೇಸುದಾಖಲಾಗಿರುತ್ತದೆ.