ಕಾರ್ಕಳ, ನ.25 (DaijiworldNews/HR): ನಗರದ ಗೋಮಟಬೆಟ್ಟದ ಗ್ಯಾಸ್ ಗೋಡೌನ್ ಬಳಿ ಸಂಭವಿಸಿದ ರಸ್ತೆ ಅಫಘಾತದಲ್ಲಿ ಬೈಕ್ಗಳೆರಡು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಸವಾರ ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಘಟನೆ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಕುಕ್ಕುಂದೂರು ಅಯ್ಯಪ್ಪನಗರದ ಅಬ್ಬು ಸಾಹೇಬ್ (54) ಗಾಯಾಳು.
ಮಿಯ್ಯಾರುನಲ್ಲಿರುವ ಮಗಳ ಮನೆಯಿಂದ ತನ್ನ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಘಟನೆಯಲ್ಲಿ ತಲೆಗೆ, ಮುಖಕ್ಕೆ ಹಾಗೂ ಕೈಕಾಲುಗಳಿಗೆ ರಕ್ತಗಾಯವಾಗಿದ್ದು ಕೋಮಾಸ್ಥಿತಿಗೆ ತಲುಪಿದ್ದಾರೆ.
ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಬೈಕ್ ಚಲಾಯಿಸಿ ಘಟನೆಗೆ ಕಾರಣನಾದ ಸಂತೋಷ್ ವಿರುದ್ಧ ಕೇಸುದಾಖಲಾಗಿದೆ.