ಮಂಗಳೂರು, ನ.25 (DaijiworldNews/PY): ಪ್ರಸ್ತುತ ವರ್ಷ ದ.ಕ ಜಿಲ್ಲೆಯ 16 ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ದಾಖಲಾತಿಯಾಗಿಲ್ಲ.
ಕೊರೊನಾ ಕಾರಣದಿಂದ ಪದವಿ ಪೂರ್ವ ಕಾಲೇಜುಗಳು ಮುಚ್ಚಲ್ಪಟ್ಟಿದ್ದವು. ಈ ನಡುವೆ ಆರು ಕಾಲೇಜುಗಳು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಕಾಲೇಜು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ. ಕಿನ್ನಿಗೋಳಿ, ಉಪ್ಪಿನಂಗಡಿ, ಅಡ್ಯಾರ್, ನಡುಪದವು, ಪಾಂಡೇಶ್ವರ ಹಾಗೂ ಉಳ್ಳಾಲದಲ್ಲಿ ಕಾಲೇಜುಗಳು ಮುಚ್ಚಲ್ಪಟ್ಟಿವೆ.
ದ. ಕ ದಲ್ಲಿ 5-10 ಹೊಸ ಪದವಿ ಪೂರ್ವ ಕಾಲೇಜುಗಳು ಆರಂಭವಾಗಿವೆ. 2020-21ರಲ್ಲಿ, ಜಿಲ್ಲೆಯ ಎಂಟು ಪದವಿಪೂರ್ವ ಕಾಲೇಜುಗಳನ್ನು ತೆರೆಯಲು ಪ್ರಸ್ತಾಪಗಳನ್ನು ಸಲ್ಲಿಸಲಾಯಿತು. ಅವುಗಳಲ್ಲಿ, ಒಂದು ಪದವಿ ಪೂರ್ವ ಕಾಲೇಜು ಗುರುವಾಯನಾಕೆರೆ ಮತ್ತು ಮಿಜಾರ್ ಬಳಿ ತೆರೆಯಲ್ಪಟ್ಟಿದೆ.
ಸುರತ್ಕಲ್ ಸಮೀಪ ಪದವಿ ಪೂರ್ವ ಕಾಲೇಜು ಆರಂಭಿಸುವಂತೆ ಹಿಂದಿನ ವರ್ಷ ಪ್ರಸ್ತಾಪ ಸಲ್ಲಿಸಲಾಗಿತ್ತು. ಪ್ರಸ್ತುತ ವರ್ಷ ಒಂದು ಪದವಿ ಪೂರ್ವ ಕಾಲೇಜು ಆರಂಭಿಸುವಂತೆ ಪ್ರಸ್ತಾಪ ಸಲ್ಲಿಸಲಾಗಿದೆ. ಆದರೆ, ಇದಕ್ಕೆ ಅನುಮತಿ ಪಡೆಯಬೇಕಾಗಿದೆ.