ಬೆಳ್ಮಣ್, ನ 25 (DaijiworldNews/MS): ಬುಧವಾರ ಸಂಜೆ ಸುರಿದ ಭಾರೀ ಗಾಳಿ ಸಹಿತ ಗುಡುಗು ಮಳೆಗೆ ಇನ್ನಾ ಗ್ರಾಮದ ಬೆರ್ನೋಟು ಎಂಬಲ್ಲಿನ ಬೇಬಿ ಮೂಲ್ಯ ಎಂಬವರ ಮನೆಯ ಚಾವಣಿಯ ಶೀಟು ಹಾರಿ ಬಿದ್ದು ಅಪಾರ ಹಾನಿಯಾದ ಘಟನೆ ನಡೆದಿದೆ.
ವಾಸದ ಮನೆಯ ಸಿಮೆಂಟ್ ಶೀತು ಹಾರಿ ಹೋಗಿದ್ದು ಅಂದಾಜು ಸುಮಾರು 50 ಸಾವಿರದಷ್ಟು ನಷ್ಟವುಂಟಾಗಿದೆ. ಶೀಟುಗಳು ಸಂಪೂರ್ಣ ಪುಡಿಯಾಗಿದ್ದು ಬಾರೀ ನಷ್ಟ ಉಂಟಾಗಿದೆ. ಮತ್ತು ಕೈನಾಲು ಎಂಬಲ್ಲಿನ ಶಾರದಾ ಆಚಾರ್ಯ ಎಂಬವರ ವಾಸದ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿದ್ದು ಸುಮಾರು ಅಂದಾಜು ರೂ. ಹತ್ತು ಸಾವಿರ ನಷ್ಟವುಂಟಾಗಿದೆ. ಹಾಗೂ ಮೂಡು ಬೆನ್ನಿ ನಾರಾಯಣ ಆಚಾರ್ಯ ರವರ ಮನೆಗೆ ಮರ ಬಿದ್ದು ಮನೆಯ ಚಾವಣಿಗೆ ಹಾನಿಯಾಗಿದ್ದು ಸುಮಾರು ಹತ್ತು ಸಾವಿರ ನಷ್ಟ ಉಂಟಾಗಿದೆ.
ಘಟನಾ ಸ್ಥಳಕ್ಕೆ ಇನ್ನಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶ ಆರ್ ಮೂಲ್ಯ , ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸತೀಶ್, ಗ್ರಾಮಕರಣಿಕರ ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.