ಬೆಳ್ತಂಗಡಿ, ನ 25 (DaijiworldNews/MS): ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ಅಕ್ರಮ ಗೋ ಸಾಗಾಟ ಪತ್ತೆಯಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಎರಡು ಹಸು , ಒಂದು ಕರು ಸಹಿತ 7 ಮಂದಿಯನ್ನು ನ.24 ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಬಸವರಾಜ್, ಅವಿನಾಶ್ ಬಿ ಆರ್, ಅಷ್ಪರಾಜ್ ಜಿ.ಎಸ್ ಹರೀಶ್ , ಬಿ.ಎಸ್ ಹರೀಶ್, ಶೀನ ಪುಜಾರಿ , ಇಸ್ಲಾಯಿಲ್ ಅವರನ್ನು ವಶಕ್ಕೆ ಪಡೆಯಲಾಗಿದೆ ಬಸವರಾಜ್ ಮತ್ತು ಇತರರು ಸುಮಾರು 18,500 ರೂ ಮೌಲ್ಯದ ಎರಡು ದನಗಳನ್ನು ಮತ್ತು ಒಂದು ಕರುವನ್ನು ಮುಂಜಾನೆ 2.45 ರ ಸಮಯದಲ್ಲಿ ಸಾಗಾಟ ನಡೆಸುತ್ತಿರುವುದು ಕಂಡು ಬಂದಿತ್ತು.
ಇದೇ ವೇಳೆ ಗೋ ಖರೀದಿಗೆ ಮುಂದಾಗಿದ್ದ ಕಾರು ಹಾಗೂ ಆರೋಪಿಗಳನ್ನು ತನಿಖೆ ನಡೆಸಿದ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದನಗಳು ಮತ್ತು ಸಾಗಾಟಕ್ಕೆ ಬಳಸಿದ ವಾಹನಗಳ ಒಟ್ಟು ಮೌಲ್ಯ 2,08,500 ರೂ.ಎಂದು ಅಂದಾಜಿಸಲಾಗಿದೆ.