ಸುರತ್ಕಲ್, ನ 24 (DaijiworldNews/MS): ಯುವಕನೋರ್ವ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋದಾಗ ಯುವಕನೊಬ್ಬ ವಿದ್ಯುತ್ ಆಘಾತಕ್ಕೆ ಈಡಾಗಿ ಸುಟ್ಟ ಗಾಯಗಳಾದ ಘಟನೆ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣ ಸಮೀಪದ ಅಗರಮೇಲು ಎಂಬಲ್ಲಿ ನ .23 ರ ಮಂಗಳವಾರ ಸಂಜೆ ನಡೆದಿದೆ.
ಮಂಗಳೂರಿನ ಸಲ್ಮಾನ್ ಪಾರಸ್ (21) ವಿದ್ಯುತ್ ಅವಘಡಕ್ಕೆ ಒಳಗಾದ ಯುವಕನಾಗಿದ್ದಾನೆ. ನಿಲುಗಡೆಗೊಂಡಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿದ ಸಲ್ಮಾನ್ ಫಾರಿಸ್ ಸೆಲ್ಫಿ ತೆಗೆಯಲು ಮುಂದಾದಾಗಿದ್ದಾನೆ . ಆದರೆ ಪಕ್ಕದಲ್ಲೇ ಹಾದು ಹೋಗಿರುವ ಹೈವೋಲ್ಟೇಜ್ ತಂತಿಗಳನ್ನು ಗಮನಿಸದ ಕಾರಣ ವಿದ್ಯುತ್ ಶಾಕ್ ಆಘಾತಕ್ಕೀಡಾಗಿ ಭಾಗಶಃ ಸುಟ್ಟು ಹೋಗಿದ್ದಾನೆ ಎಂದು ತಿಳಿದು ಬಂದಿದೆ. ಗಾಯಗೊಂಡ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ