ಮಂಗಳೂರು, ನ. 23 (DaijiworldNews/SM): ದೇಶದಲ್ಲಿ ಕಾರ್ಪೊರೇಟ್ ಕಂಪೆನಿಗಳ ವಿರುದ್ಧ ಹೋರಾಟಗಳಾಗಿವೆ. ನರೇಂದ್ರ ಮೋದಿ ವಿರುದ್ದ ಮಾತ್ರವಲ್ಲ ಕಾರ್ಪೊರೇಟ್ ಕಂಪೆನಿಗಳ ವಿರುದ್ದ ಹೋರಾಟವಾಗಿದೆ. ಇದು ಕೃಷಿಕರಿಗೆ ಸಿಕ್ಕಂತಹ ವಿಜಯವಾಗಿದೆ ಎಂದು ಕೇರಳದ ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್ ಹೇಳಿದ್ದಾರೆ.
ಗುರುಪುರ ಕೈಕಂಬ ಸಮಿಪ ನಡೆದ ಸಿಪಿಐಎಂ ಸಮಾವೇಶದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ಒಂದು ವರ್ಷಗಳ ಕಾಲ ರೈತರು ಹೋರಾಟ ನಡೆಸಿದ್ದರು. ಅನ್ನ ನೀರು ಬಿಸಿಲು ನೋಡದೆ ಹೋರಾಟ ನಡೆಸಿದ್ದಾರೆ. ಹೋರಾಟದ ಮೂಲಕ ರೈತರು ಮೋದಿ ಕ್ಷಮೆ ಕೇಳುವಂತೆ ಮಾಡಿದ್ದರು. ನರೇಂದ್ರ ಮೋದಿ ಸರ್ಕಾರ ರೈತರ ಅಭಿವೃದ್ಧಿ ಹೆಸರಲ್ಲಿ ಕೃಷಿ ಕಾಯ್ದೆ ತಂದರು. ಬಿಜೆಪಿ ಕಾರ್ಯಕರ್ತರು ಇದನ್ನು ಸಮರ್ಥಿಸಿದ್ದರು. ಈ ಕೃಷಿ ಕಾಯ್ದೆ ಯಾವುದೇ ರೈತರ ಪರವಾಗಿರಲಿಲ್ಲ ಎಂದು ಶೈಲಜಾ ಟೀಚರ್ ಅಸಮಾಧಾನ ವ್ಯಕ್ತಪಡಿಸಿದರು.
ರೈತ ಸಂಪತ್ತನ್ನು ಕಾರ್ಪೊರೇಟ್ ಕಂಪನಿ ಕೈಗೆ ನೀಡುವ ಕಾಯ್ದೆಯಾಗಿದೆ. ರೈತರ ಸಂಪೂರ್ಣ ಸಂಪತ್ತು ಕೊಲ್ಲೆ ಹೊಡೆಯವ ಕಾರ್ಯ ಆಗಿತ್ತು. ದೇಶದಲ್ಲಿ ಬಿಜೆಪಿ ಸರ್ಕಾರವನ್ನು ನಡೆಸುವುದು ಸಂಘಪರಿವಾರ. ಬಿಜೆಪಿಯಲ್ಲಿ ಆರ್ ಎಸ್ ಎಸ್, ವಿಚ್ ಪಿ ಹೀಗೆ ಹಲವು ಸಂಘಟನೆಗಳಿದೆ. ಸಂಘಪರಿವಾರ ಭಕ್ತಿ ಹೆಸರಲ್ಲಿ ಜನರನ್ನು ಮೋಸ ಮಾಡುತ್ತಾರೆ. ಕೇರಳದಲ್ಲಿಯೂ ಅಲ್ಲಲ್ಲಿ ಕೆಲವೆಡೆ ಇವರ ಸಂಘಟನೆ ಇದೆ. ಆದರೆ, ಅದರ ಬೆಳವಣಿಗೆಗೆ ನಮ್ಮ ಸಿಪಿಐಎಂ ಬಿಟ್ಟಿಲ್ಲ. ಕೃಷಿ ಕಾಯ್ದೆಯಲ್ಲಿ ಮುಂದಿನ ದಿನಗಳಲ್ಲಿ ಪಡಿತರ ರದ್ದು ಆಗಬಹುದು. ಬಿಜೆಪಿ ಪಕ್ಷದ ನೀತಿ ಕಾರ್ಪೊರೇಟ್ ನೀತಿಗಳಾಗಿದೆ. ಅದಕ್ಕಾಗಿ ಪೆಟ್ರೋಲ್ ತೈಲ ಬೆಲೆ ಗಗನಕ್ಕೇರಿದೆ. ಮೋದಿ ಸರ್ಕಾರ ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡಿ ದೇಶವನ್ನು ಕೊಲ್ಲೆಹೊಡೆಯುತ್ತಿದೆ. ಹೋರಾಟ ಮಾಡಿದವರ ಧ್ವನಿ ಅಡಗಿಸುವ ಕಾರ್ಯ ಮಾಡ್ತಾ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೋದಿ ಸರ್ಕಾರದ ಆಯುಧ, ಕೋಮುವಾದ ಆಗಿದೆ. ದೇಶದಲ್ಲಿ ಧರ್ಮ-ಧರ್ಮದ ಮಧ್ಯೆ ವೈಷಮ್ಯ ತರುವುದು ಇವರ ಧೋರಣೆಯಾಗಿದೆ. ದೇಶದಲ್ಲಿ ಧರ್ಮ ಹೆಸರಲ್ಲಿ ಅದೆಷ್ಟು ಜೀವಗಳನ್ನು ಬಲಿಪಡೆದಿದ್ದಾರೆ. ಸರ್ಕಾರ ಇದನ್ನು ಬಿಟ್ಟು ಜನರ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ ಎಂದು ಕೇರಳದ ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್ ಹೇಳಿದ್ದಾರೆ.