ಬಾರ್ಕೂರು, ನ 23 (DaijiworldNews/MS): ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ 15 ವರ್ಷಗಳಿಂದ ನಿಲುಗಡೆಯಾಗುತ್ತಿದ್ದ ಮುಂಬಯಿ - ಮಂಗಳೂರು ಮತ್ಸ್ಯಗಂಧ ರೈಲು ಬಾರಕೂರು ನಿಲ್ದಾಣದಲ್ಲಿ ನಿಲುಗಡೆಯನ್ನು ಇಲಾಖೆ ಸ್ಥಗಿತಗೊಳಿಸಿದ್ದರ ಕುರಿತು ಮತ್ತು ಬೆಂಗಳೂರು ಕಾರವಾರ ವೆಸ್ಟೋಡಾಮ್ ಹಗಲು ರೈಲುಗಳ ನಿಲುಗಡೆ ಹಾಗೂ ಬಾರ್ಕೂರು ರೈಲು ನಿಲ್ದಾಣ ಮೇಲ್ದರ್ಜೆಗೆ ಆಗ್ರಹಿಸಿ ಬಾರಕೂರು ರೈಲು ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾಲೋಚನಾ ಸಭೆಯು ಬಾರಕೂರು ರಾಮಮಂದಿರದಲ್ಲಿ ಬಾರ್ಕೂರು ಗ್ರಾಮಪಂಚಾಯತ್ ಅದ್ಯಕ್ಷರಾದ ಶಾಂತರಾಮ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾರಕೂರು ಇತಿಹಾಸ ಪ್ರಸಿದ್ದ ಪ್ರದೇಶವಾಗಿದ್ದು ದೇವಾಲಯ ಗಳ ನಗರಿಯಾಗಿದ್ದು ಪ್ರವಾಸಿಗರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇಲಾಖೆಯ ನಿರ್ಧಾರದಿಂದ ತೊಂದರೆ ಯಾಗಿದ್ದು ಈ ಕುರಿತು ನಾವು ಸಂಂಘಟಿತರಾಗಿ ಸಮಸ್ಯೆಗೆ ಬಗೆಹರಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದ ಹೋರಾಟದ ಪ್ರಮುಖರಾದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಬಾರಕೂರು ರೈಲು ನಿಲ್ದಾಣ ಸುತ್ತಮುತ್ತಲಿನ 15 ಕ್ಕೂ ಹೆಚ್ಚು ಗ್ರಾಮದ ಜನರಿಗೆ ಅನುಕೂಲಕರವಾಗಿದ್ದು ರೈಲ್ವೇ ಇಲಾಖೆ 15 ವರ್ಷಗಳಿಂದ ನಿಲುಗಡೆ ನೀಡುತ್ತಿದ್ದ ಮಂಗಳೂರು- ಮುಂಬಯಿ ಮತ್ಯಗಂದ ರೈಲು ನಿಡುಗಡೆ ನೀಡದಿರುವುದು ಯಾತ್ರಿಕರು - ಕುಂದಾಪುರಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ ಹಾಗೆಯೇ ರೈಲುನಿಲ್ದಾಣ ಮೇಲ್ದರ್ಜೆಗೆ ಏರಬೇಕಾಗಿದೆ ಈ ಪ್ರಯುಕ್ತ ಈ ಎಲ್ಲಾ ಗ್ರಾಮಗಳ ವಿವಿಧ ಸಂಘಟನೆಗಳು ,ಗ್ರಾಮಪಂಚಾಯತ್ ಅದ್ಯಕ್ಷರು,ಸದಸ್ಯರು ಗಳು,ರಿಕ್ಷಾ ಟ್ಯಾಕ್ಸಿ ಯೂನಿಯನ್ ಗಳು ಸೇರಿ ಸ್ಥಳೀಯ ಶಾಸಕರು, ಸಂಸದರ ಮೂಲಕ ,ರೈಲ್ವೆ ಇಲಾಖೆಗೆ ಸಮಸ್ಯೆ ಬಗೆಹರಿಸಲು ಮನವಿ ಸಿದ್ದಪಡಿಸಿ ಕ್ರಮಕೈಗೊಳ್ಳುವಂತೆ ಅಗ್ರಹಿಸೋಣ. ಇಲಾಖೆ 25 ದಿನಗಳ ಒಳಗೆ ಸೂಕ್ತ ಕ್ರಮಕೈಗೊಳ್ಳದೆ ಸಮಸ್ಯೆ ಬಗೆಹರಿಸದಿದದ್ದಲ್ಲಿ ಎಲ್ಲ ಸಂಘ ಸಂಸ್ಥೆಗಳ ನೇತ್ರತ್ವದಲ್ಲಿ ಬಾರ್ಕೂರು ರೈಲು ಹೋರಾಟ ಸಮಿತಿಯಿಂದ ಹೋರಾಟಕ್ಕೂ ಸಿದ್ದ ಎಂದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅದ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ ಬಾರ್ಕೂರು ಐತಿಹಾಸಿಕ ಸ್ಥಳವಾಗಿದ್ದು ರೈಲ್ವೆ ಸಮಸ್ಯೆಗಳ ಕುರಿತು ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿ ಸಂಘಟಿತರಾಗಿರುವುದು ಇಲಾಖೆ ತಕ್ಷಣ ಪರಿಹರಿಸಲಿ ಎಂದರು.
ಹನೆಹಳ್ಳಿ ಗ್ರಾಮಪಂಚಾಯತ್ ಅದ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ, ಕಾಡೂರು ಗ್ರಾಮಪಂಚಾಯತ್ ಅದ್ಯಕ್ಷರಾದ ಪಾಂಡುರಂಗ ಶೆಟ್ಟಿ, ಯಡ್ತಾಡಿ ಗ್ರಾಮಪಂಚಾಯತ್ ಅದ್ಯಕ್ಷೆ ಶ್ರೀಮತಿ ಲತಾ,ಹಂದಾಡಿ ಗ್ರಾಮಪಂಚಾಯತ್ ಅದ್ಯಕ್ಷ ಉದಯ್ ಪೂಜಾರಿ ,ವಿವಿಧ ಗ್ರಾಮಗಳ ಗ್ರಾ.ಪಂ ಸದಸ್ಯರುಗಳು,50 ಕ್ಕೂಹೆಚ್ಚು ಸಂಘಸಂಸ್ಥೆಗಳ ಅದ್ಯಕ್ಷರು,ವಿವಿಧ ದೇವಸ್ಥಾನಗಳ ಮುಖ್ಯಸ್ಥರು,ರೋಟರಿ ಕ್ಲಬ್ ಗಳ ಅದ್ಯಕ್ಷರುಗಳು,, ರಿಕ್ಷಾ,ಟ್ಯಾಕ್ಸಿಯೂನಿಗಳ ಪ್ರಮುಖರು ಉಪಸ್ಥಿತರಿದ್ದರು ಆಗಮಿಸಿದ ವಿವಿಧ ಸಂಘಟನೆಯ ಪ್ರಮುಖರು ವಿವಿಧ ಸಲಹೆ ಸೂಚನೆ ನೀಡಿದರು