ಬಾರ್ಕೂರು, ನ.21 (DaijiworldNews/HR): ಇಂದು ಆರೋಗ್ಯ ಇಲಾಖೆ ಹಾಗೂ ಇತರ ಇಲಾಖಾಧಿಕಾರಿಗಳ ಜೊತೆಗೂಡಿ ಬಾರ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಮನೆಮನೆಗೆ ಲಸಿಕಾ ಮಿತ್ರ ಕೋವಿಡ್ 19 ಲಸಿಕಾ ಕಾರ್ಯಕ್ರಮ ನಡೆಸಲಾಯಿತು.
-
-
-
ಹಿಲಿಯಾಣ, ಹೊಸಾಳ ಪ್ರದೇಶದಲ್ಲಿ ಮನೆ ಭೇಟಿ ಹಾಗೂ ಲಸಿಕಾರಣದ ಮಹತ್ವದ ಬಗ್ಗೆ ಮತ್ತು ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು. ಸೈಬರಕಟ್ಟೆಯ ಸರಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕೋವಿಡ್ ಹಾಗೂ ಕೋವಿಡ್ ಲಸಿಕೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.
ಸೈಬರಕಟ್ಟೆಯ ಶಿರಿಯಾರ ಕಾಜರಹಳ್ಳಿಯಲ್ಲಿ ಕೋವಿಡ್-19 ಲಸಿಕೆ ಪಡೆಯಲು ಹಿಂಜರಿದ 9 ರೆಫ್ಯೂಸಲ್ ಪ್ರಕರಣಗಳಿದ್ದುದರಿಂದ ಸದರಿಯವರ ಮನೆಗಳಿಗೆ ಭೇಟಿ ನಡೆಸಿ ಈ ವೇಳೆ ಲಸಿಕೆ ಪಡೆಯುವಂತೆ ಮನವೊಲಿಸಲಾಯಿತು. ಕ್ಷೇತ್ರ ಭೇಟಿಯಿಂದ ಕೆಲವೊಂದು ಮನೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಹಿಂಜರಿಕೆ ಇರುವುದು ಗಮನಕ್ಕೆ ಬಂದಿರುವುದರಿಂದ ಈಗಾಗಲೇ ಜಿಲ್ಲೆಯಲ್ಲಿ ಲಸಿಕೆ ಪಡೆದಿರುವ ಜನತೆ ತಮ್ಮ ತಮ್ಮ ಮನೆಯಲ್ಲಿ, ತಮ್ಮ ಅಕ್ಕ ಪಕ್ಕದ ಮನೆಗಳಲ್ಲಿ, ಯಾರಾದರೂ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಲ್ಲಿ ಅವರ ಮನವೊಲಿಸಿ ಎಲ್ಲೂರು ಲಸಿಕೆ ಪಡೆಯುವಂತೆ ಪ್ರೇರೇಪಿಸಲಾಯಿತು.