ಸುರತ್ಕಲ್, ನ 20 (DaijiworldNews/MS): ಸುರತ್ಕಲ್ ಬೀಚ್ ಗೆ ಬಂದಿದ್ದ ಅನ್ಯಮತೀಯ ಜೋಡಿಯನ್ನು ಗಮನಿಸಿದ ಸುರತ್ಕಲ್ ಬಜರಂಗದಳದ ಕಾರ್ಯಕರ್ತರು ಅವರನ್ನು ಪೊಲೀಸರಿಗೆ ಒಪ್ಪಿಸಲು ಮುಂದಾದಾಗ ಜೋಡಿ ತಪ್ಪಿಸಿಕೊಂಡು ಪರಾರಿಯಾದರೆ, ಇನ್ನೋರ್ವ ಯುವಕ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದು ಸುರತ್ಕಲ್ ಠಾಣೆಗೆ ಒಪ್ಪಿಸಿದ ಘಟನೆ ನ .19 ರ ಶುಕ್ರವಾರ ನಡೆದಿದೆ.
ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದ ಹುಬ್ಬಳ್ಳಿ ಮೂಲದ ಯುವತಿಯೊಬ್ಬಳನ್ನು ಕುದ್ರೋಳಿ ಮೂಲದ ಯುವಕ ಪುಸಲಾಯಿಸಿ ತನ್ನ ಸ್ನೇಹಿತನ ಜತೆಗೂಡಿ ಬೀಚಿಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಮಾಹಿತಿ ಪಡೆದ ಕಾರ್ಯಕರ್ತರು ವಿಚಾರಿಸಲು ಮುಂದಾದಾಗ ತಪ್ಪಿಸಿಕೊಂಡಿದ್ದು ಯುವಕನ ಸ್ನೇಹಿತ ದೀಪಕನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
ಪೊಲೀಸರು ತಪ್ಪಿಸಿಕೊಂಡ ಯುವಕನ ಹುಡುಕಾಟ ನಡೆಸಿದ್ದಾರೆ . ಆಸೆ ಆಮಿಷಗಳನ್ನು ಒಡ್ಡಿ ಯುವತಿಯನ್ನು ಕರೆ ತರಲಾಗಿದ್ದು ಲವ್ ಜಿಹಾದ್ ಭಾಗವಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ರ ತನಿಖೆ ನಡೆಸದಿದ್ದಲ್ಲಿ ಉಗ್ರ ಹೋರಾಟ ನಡೆಸಲೇಕಾಗುತ್ತದೆ ಎಂದು ಬಜರಂಗದಳ ಎಚ್ಚರಿಸಿದೆ.