ಉಡುಪಿ, ನ.19 (DaijiworldNews/HR): ದೇಶದಲ್ಲಿ ರೈತ ಸಮುದಾಯ ಹಾಗೂ ರೈತ ಸಂಘಟನೆಗಳ ಹಾಗೂ ಪ್ರತಿಪಕ್ಷಗಳ ಭಾರೀ ವಿರೋಧ ಹಾಗೂ ವಿವಾದಕ್ಕೆ ಗುರಿಯಾಗಿದ್ದ ಕೃಷಿ ಕಾಯ್ದೆಯನ್ನು ಕೇಂದ್ರ ಸರಕಾರ ವಾಪಾಸ್ ಹಿಂದಕ್ಕೆ ಪಡೆದಿದ್ದು,ಈ ಬಗ್ಗೆ ಕೇಂದ್ರ, ರಾಜ್ಯ ಖಾತೆ ಕೃಷಿ ಸಚಿವೆ ಶೋಭಾ ಕರಂದ್ಲಾಂಜೆ ಉತ್ತರಿಸದೆ ನಿರುತ್ತರರಾಗಿ ಹಿಂದುರುಗಿದ್ದಾರೆ.
ಉಡುಪಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಸಚಿವೆ ಶೋಭಾ ಅವರಲ್ಲಿ ಕೃಷಿ ಕಾಯ್ದೆ ಹಿಂಪಡೆದ ಕುರಿತು ಸುದ್ದಿಗಾರರು ಪ್ರಶ್ನಿಸಿದ್ದು ಇದಕ್ಕೆ ಪ್ರತಿಕ್ರಿಯಿಸದೇ ನಿರುತ್ತರರಾಗಿ ನಡೆದಿದ್ದಾರೆ.
ಇನ್ನು ಬಿಟ್ ಕಾಯಿನ್, ವಿಧಾನ ಪರಿಷತ್ ಚುನಾವಣೆ ಮತ್ತಿತರ ವಿಷಯದ ಕುರಿತು ಸಚಿವೆ ಶೋಭಾ ಪ್ರಸ್ತಾಪ ಮಾಡಿದ್ದು, ಈ ಹಿಂದೆ ಪ್ರತಿಭಟನಾ ನಿರತ ರೈತರ ಕುರಿತಾಗಿ ಮಾತನಾಡುತ್ತಿದ್ದ ಅವರು ಇಂದು ಪ್ರತಿಕ್ರಿಯಿಸದೇ ಮುನ್ನಡೆದಿದ್ದಾರೆ.