ಕಾಸರಗೋಡು, ನ.19 (DaijiworldNews/HR): ಮನೆಯಲ್ಲಿ ಕಬ್ಬಿಣದಿಂದ ನಿರ್ಮಿಸಿದ ಕೋಣೆಯೊಳಗೆ ಕೂಡಿ ಹಾಕಲ್ಪಟ್ಟಿದ್ದ ಮಾನಸಿಕ ಸ್ಥಿಮಿತ ಕಳೆದುಕೊಂಡ 20 ವರ್ಷದ ಯುವತಿಯ ಮನೆಗೆ ರಾಜ್ಯ ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನೇತೃತ್ವದಲ್ಲಿ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
-
ಚೆಂಗಳ ಪಂಚಾಯತ್ನ ವಿದ್ಯಾನಗರ ಕಲ್ಲಕಟ್ಟ ರಸ್ತೆ ಬದಿ ವಾಸವಾಗಿರುವ ರಾಜೇಶ್ವರಿ ಮತ್ತು ಪುತ್ರಿ ಅಂಜಲಿ ಮತ್ತು ಅಜ್ಜಿ ವಾಸವಾಗಿದ್ದು, 20 ವರ್ಷದ ಅಂಜಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಸ್ವಸ್ಥರಾಗಿದ್ದು, ಈಕೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಹೊರಗಡೆ ಬಂದಲ್ಲಿ ಯುವತಿ ವಯೋ ವೃದ್ದೆ ಮತ್ತು ಮೇಲೆ ಹಲ್ಲೆ ನಡೆಯುವರೆಂಬ ಭಯದಿಂದ ಯುವತಿಯನ್ನು ಕೂಡಿ ಹಾಕಿ ಕೋಣೆಗೆ ಕಬ್ಬಿಣದ ಗೇಟ್ ಅಳವಡಿಸಲಾಗಿತ್ತು.
ಈ ಬಗ್ಗೆ ಮಾಹಿತಿ ತಿಳಿದ ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತೀದೇವಿ, ಸದಸ್ಯೆ ಶಾಹಿದಾ ಕಮಾಲ್ ಮನೆಗೆ ತಲಪಿ ಪರಿಸ್ಥಿತಿಯನ್ನು ಗಮನಿಸಿದರು.
ಯುವತಿಗೆ ಅಗತ್ಯವಾದ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸಲು ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಗೆ ಆದೇಶ ನೀಡಿದ್ದು, ಉಚಿತ ಚಿಕಿತ್ಸೆ ನೀಡಲು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆ ಎಂದು ಭೇಟಿಯಾದ ಬಳಿಕ ಆಯೋಗದ ಅಧ್ಯಕ್ಷೆ ತಿಳಿಸಿದ್ದಾರೆ.