ಮಂಗಳೂರು, ನ. 16 (DaijiworldNews/SM): ಒಂದೆಡೆ ಕಿತ್ತು ತಿನ್ನುವ ಬಡತನ, ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ. ದಿನಕ್ಕೊಂದರಂತೆ ಕಷ್ಟ ಸಂಕಷ್ಟಗಳು ಎದುರಾಗುತ್ತಿದ್ದರೂ ಛಲ ಬಲದಿಂದ ಎಲ್ಲವನ್ನು ಮೆಟ್ಟಿನಿಂತು ಯುವತಿಯೊಬ್ಬಳು ಸಾಧನೆಯ ಶಿಖರ ತಲುಪಿದ ಕಥೆಯಿದು. ಹೌದು ಮಂಗಳೂರು ನಗರದ ಅಣತಿ ದೂರದಲ್ಲಿರುವ ಸುರತ್ಕಲ್ ಕಾಟಿಪಳ್ಳ ಮೂರನೇ ಕ್ರಾಸ್ ನಿವಾಸಿ ಪೂರ್ಣಿಮಾ ಶೆಟ್ಟಿಯವರ ಪುತ್ರಿ ಪ್ರಜ್ಞಾ ಶೆಟ್ಟಿ ಕ್ರೀಡಾ ಕ್ಷೇತ್ರದ ಉತ್ತುಂಗಕ್ಕೇರಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಕಾಟಿಪಳ್ಳದ ಪ್ರಜ್ಞ ಶೆಟ್ಟಿ ಮತ್ತು ಆಕೆಯ ತಾಯಿ ಪೂರ್ಣಿಮಾ ಶೆಟ್ಟಿ ಸ್ವಂತ ಸೂರಿಲ್ಲದೆ ಅಜ್ಜನ ಮನೆಯಲ್ಲೇ ವಾಸವಾಗಿದ್ದಾರೆ. ಕಿತ್ತು ತಿನ್ನುವ ಬಡತನ ಇದ್ರು ಪ್ರಜ್ಞಾ ಅವರ ಪ್ರತಿಭೆಯಲ್ಲಿ ಎಲ್ಲೊಂದರಷ್ಟು ಕೊರತೆ ಕಾಣಲಿಲ್ಲ. ಅಜ್ಜ ಅಜ್ಜಿ ನೆರಳಿನೊಂದಿಗೆ ತಾಯಿಯ ಸಂಪೂರ್ಣ ಸಹಕಾರದೊಂದಿಗೆ ಸ್ಥಳೀಯ ವಿದ್ಯಾಸಂಸ್ಥೆಗಳ ಮೂಲಕ ವಿದ್ಯಾಭ್ಯಾಸ ಪಡೆದುಕೊಂಡ್ರೆ, ಈಕೆಯ ಬಡತನದ ಮಧ್ಯೆ ಕಲಾ ಮಾತೆ ಈಕೆಗೆ ಒಳಿಯುತ್ತಾಳೆ. ಅದು ಎಲ್ಲಿಯವರೆಗೆ ಎಂದರೆ ಶಾಲಾ ದಿನಗಳಲ್ಲೇ ಪ್ರಜ್ಞಾ ನೃತ್ಯ, ಭರತನಾಟ್ಯ, ಎನ್ನುತ್ತ ಹೆಜ್ಜೆ ಹಾಕದ ಕ್ಷೇತ್ರಗಳಲ್ಲಿಲ್ಲ. ಪ್ರದರ್ಶನ ನೀಡದ ವೇದಿಕೆಗಳಿಲ್ಲ. ಈಕೆಯ ಪ್ರತಿಭೆಗೆ ತಾನೂ ಕಲಿತ ಸಂಸ್ಥೆ ಸೇರಿ ಕುಟುಂಬಸ್ಥರು ಸಂಪೂರ್ಣ ಸಹಾಕರ ನೀಡಿದ್ದಾರೆ..ಅದರಂತೆ ಬೆಳೆದು ಬಂದ ಯುವ ಪ್ರತಿಭೆ ಕರಾಟೆ, ಕಿಕ್ ಬಾಕ್ಸಿಂಗ್ ನಲ್ಲೂ ತನ್ನ ಪಾರಮ್ಯ ಮೆರೆದಿದ್ದಾರೆ. ತನ್ನ ಕ್ರೀಡೆ, ಕಲಾ ಚಾತುರ್ಯತೆಯದ ಮೂಲಕ ೩೦ಕ್ಕೂ ಅಧಿಕ ಪದಕಗಳನ್ನು ಈಕೆ ಗೆದ್ದುಕೊಂಡಿದ್ದಾರೆ. ಇದೆಲ್ಲದರ ಮಧ್ಯೆ ಈಕೆ ತನ್ನ ಕಲಿಕಾ ಕ್ಷೇತ್ರದಲ್ಲೂ ಅಮೋಘ ಸಾಧನೆ ಮಾಡುತ್ತ ತನ್ನ ಡಿಗ್ರಿ ವಿದ್ಯಾಭ್ಯಾಸವನ್ನು ಬಿಸಿಎ ವಿಭಾಗದಲ್ಲಿ 82 ಶೇಕಡಾ ಅಂಕಗಳನ್ನು ಗಳಿಸುವ ಮೂಲಕ ಸಾಧನೆಗೆ ಬಡತನ ಅಡಿಲ್ಲಎಂದು ನಿರೂಪಿಸಿದ್ದಾಳೆ.
ಆದರೆ ಇದೀಗಾ ಈಕೆ ಕಿಕ್ ಬಾಕ್ಸಿಂಗ್ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದಿದ್ದು ಮುಂದೆ ಏಷ್ಯನ್ ಗೇಮ್ಸ್ ನಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಬೇಕೆಂಬ ಕನಸು ಹೊತ್ತು ನಿಂತಿದ್ದಾಳೆ. ಅದ್ರೆ ದಿನದಿಂದ ದಿನಕ್ಕೆ ಮನೆಯಲ್ಲಿ ಹೆಚ್ಚಾಗುತ್ತಿರುವ ಬಡತನ ತಾಯಿ ರಾತ್ರಿ ಹಗಲೆನ್ನದೆ ದುಡಿಯುವ ಮೂಲಕ ಪ್ರಜ್ಞಾ ಕೂಡಾ ಉದ್ಯೋಗದೊಂದಿಗೆ ತನ್ನ ಕನಸಿನ ಗೂಡು ಸೇರಬೇಕು ಎಂಬ ಗುರಿ ಹೊಂದಿದ್ದಾರೆ. ಬಡತನವೊಂದೇ ಈಕೆಯ ಕನಸಿನ ಬುತ್ತಿಗೆ ಮುಳುವಾಗುತ್ತಿದೆ. ನಿತ್ಯ ಬಿಗಡಾಯಿಸುತ್ತಿರುವ ಕುಟುಂಬದ ಜವಾಬ್ದಾರಿ ಪ್ರಜ್ಞಾಳ ಉನ್ನತ ವಿದ್ಯಾಭ್ಯಾಸದ ಕನಸಿನೊಂದಿಗೆ, ಏಷ್ಯನ್ ಗೇಮ್ಸ್ ನಲ್ಲಿ ಭಾಗಿಯಾಗಿ ಚಿನ್ನದ ಪದಕ ಪಡೆಯುವ ಕನಸು ನನಸಾಗದೆ ಉಳಿಯುವಂತಾಗಿದೆ ಎನ್ನುತ್ತಾರೆ ಪ್ರಜ್ಞಾಳ ತಾಯಿ.
ಒಟ್ಟಿನಲ್ಲಿ ಅರಳುವ ಯುವ ಪ್ರತಿಭೆಗೆ ಬಡತನ ಒಂದು ಮುಲ್ಲಗದೆ ಅದನ್ನು ಮೆಟ್ಟಿನಿಲ್ಲುವ ಪ್ರಯತ್ನಕ್ಕೆ ಮುಂದಾಗಿರುವ ಪ್ರಜ್ಞಾ ಶೆಟ್ಟಿಗೆ ನೆರವಿನ ಹಸ್ತ ಅಗತ್ಯವಿದೆ.