ಉಡುಪಿ, ನ. 16 (DaijiworldNews/SM): ಪೊಡವಿಗೊಡೆಯನ ನಾಡಿನಲ್ಲಿ ದೀಪೋತ್ಸವ ಕಣ್ತುಂಬಿಕೊಳ್ಳುವುದಕ್ಕೆ ಭಕ್ತರ ಸಾಲು ಸಾಲಾಗಿ ಬರುತ್ತಾರೆ. ಅದರಂತೆ ಶ್ರೀಕೃಷ್ಣ ಮಠದಲ್ಲಿ ಆರಂಭವಾದ ನಾಲ್ಕು ದಿನಗಳ ತೆಪ್ಪೋತ್ಸವ ಮತ್ತು ಲಕ್ಷ ದೀಪೋತ್ಸವ ಮಹೋತ್ಸವ ಅದ್ದೂರಿಯಾಗಿ ನೆರವೇರಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ಪುನೀತರಾದರು.
ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದರು. ಸಂಜೆ ಇಲ್ಲಿನ ಕಾರ್ ಸ್ಟ್ರೀಟ್ನಲ್ಲಿ ವಿವಿಧ ಮಠಗಳ ಹಿರಿ-ಕಿರಿಯ ಮುಖಂಡರು ಸೇರಿ ಅಲಂಕೃತ ಪೀಠಗಳ ಮೇಲೆ ಮಣ್ಣೆತ್ತುಗಳನ್ನು ಇಟ್ಟು ದೀಪಗಳ ಹಬ್ಬ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ಸಂಜೆ ನಡೆದ ಉತ್ಸವದಲ್ಲಿ ಆರು ಮಠಗಳ ಸ್ವಾಮೀಜಿಗಳು ಸೇರಿ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿ ಅರ್ಘ್ಯ ಅರ್ಪಿಸಿದರು.
ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಸಹಸ್ರಾರು ಭಕ್ತರು ದೀಪಾಲಂಕಾರ ಮಾಡಿ ಧನ್ಯರಾದರು. ಶ್ರೀಗಳ ಉತ್ಸವ ಮೂರ್ತಿಯನ್ನು ಅಲಂಕೃತ ತೆಪ್ಪದಲ್ಲಿ ಇರಿಸಲಾಯಿತು ಹಾಗೂ ವಾದ್ಯಗಳೊಂದಿಗೆ ಕೊಳದ ಸುತ್ತಲೂ ಕೊಂಡೊಯ್ಯಲಾಯಿತು.
ಇನ್ನು ನವೆಂಬರ್ 19 ರವರೆಗೆ ನಾಲ್ಕು ದಿನಗಳ ಕಾಲ ಲಕ್ಷ ದೀಪೋತ್ಸವ ನಡೆಯಲಿದ್ದು, ದೂರದೂರುಗಳಿಂದಲೂ ಭಕ್ತರು ಕ್ಷೇತ್ರದತ್ತ ಆಗಮಿಸುತ್ತಿದ್ದಾರೆ.
ಪರ್ಯಾಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಣಿಮಠದ ಜೂ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಪಲಿಮಾರು ಮಠದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಉತ್ಸವದಲ್ಲಿ ಪಾಲ್ಗೊಂಡಿದ್ದರು.