ಕಾಸರಗೋಡು, ನ. 16 (DaijiworldNews/SM): ಕೆನಡಾಕ್ಕೆ ವೀಸಾ ನೀಡುವುದಾಗಿ ಭರವಸೆ ನೀಡಿ ನೀರ್ಚಾಲ್ ನ ಯುವಕನೋರ್ವನಿಂದ 3.30 ಲಕ್ಷ ರೂ. ಪಡೆದು ವಂಚನೆ ನಡೆಸಿದ್ದ ಹೈದರಾಬಾದ್ ಮೂಲದ ವಂಚನೋರ್ವನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹೈದರಾಬಾದ್ ನ ಮಜೀಶ್ ಮನೋಹರ್(35) ಎಂದು ಗುರುತಿಸಲಾಗಿದೆ. ನೀರ್ಚಾಲ್ ನ ರವೀಂದ್ರ ನಾಯ್ಕ್ ಎಂಬವರಿಂದ ಹಣ ಪಡೆದು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ.
2019 ರ ರವೀಂದ್ರ ನಾಯ್ಕ್ ರಿಂದ ಹಣ ಪಡೆದಿದ್ದನು . ಸಂಬಂಧಿಕರೋರ್ವರ ಮೂಲಕ ತಿರುವನಂತಪುರದಲ್ಲಿ ಮನೀಶ್ ನ ಪರಿಚಯ ವಾಗಿದ್ದು, ಬಳಿಕ ಕೆನಡಾಕ್ಕೆ ವೀಸಾ ನೀಡುವುದಾಗಿ ಹಣ ನೀಡಿದ್ದು, ಆದರೆ ವರ್ಷ ಕಳೆದರೂ ವೀಸಾ ನೀಡದೆ ಮಜೀಶ್ ತಲೆ ಮರೆಸಿಕೊಂಡಿದ್ದ. ತನಿಖೆ ನಡೆಸಿದ ಪೊಲೀಸರು ಆರೋಪಿಯು ಹೈದರಾಬಾದ್ ನಲ್ಲಿರುವ ಲಭಿಸಿದ ಮಾಹಿತಿಯಂತೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈತ ಕಾಸರಗೋಡು ಜಿಲ್ಲೆಯಿಂದ ಹಲವರಿಗೆ ವಂಚನೆ ನಡೆಸಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.