ಕಾರ್ಕಳ, ನ.16 (DaijiworldNews/HR): ತಾಲೂಕಿನಾದ್ಯಂತ ಅಕಾಲಿಕ ಮಳೆಯ ಆರ್ಭಟವು ಮುಂದುವರೆದಿದ್ದು ಭಾರಿ ಮಳೆಗೆ ಕಾರ್ಕಳ- ಶೃಂಗೇರಿ -ಕುದುರೆಮುಖ ಸಂಪರ್ಕೀಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ನಾಲ್ಕು ಗಂಟೆಗೂ ಮಿಕ್ಕಿ ವಾಹನ ಸಂಚಾರ ಮೊಟಕುಗೊಂಡಿತು.
-
ಮಾಳ ಅರಣ್ಯ ಚೆಕ್ ಪೋಸ್ಟ್ ದಿಂದ ಸುಮಾರು 3 ಕಿ,ಮೀ ದೂರದಲ್ಲಿ ಅಬ್ಬಾಸ್ ಕಟ್ಟಿಂಗ್ ಸಮೀಪದಲ್ಲಿ ಎಸ್.ಕೆ.ಬಾರ್ಡರ್ನಲ್ಲಿ ಬೃಹತ್ ಮರವೊಂದು ಧರೆಗುರುಳಿತು.
ಸಾಲುಗಟ್ಟಿ ವಾಹನಗಳು ಸಾಲು ನಿಂತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಂಚಾರ ಮುಕ್ತ ಗೊಳಿಸಿದ್ದಾರೆ.