ಮಂಗಳೂರು, ನ. 15 (DaijiworldNews/SM): ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಆಮಿಷ ಒಡ್ಡುವ ಅಭ್ಯರ್ಥಿಗಳಿಗೆ ದ.ಕ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ.
ಯಾರೇ ವ್ಯಕ್ತಿಗಳು ನಮ್ಮ ಪಾರ್ಟಿಯ ಓಟರ್ಸ್ ಬಗ್ಗೆ ಕೈ ಹಾಕಬಾರದು. ನಮ್ಮ ಕಾರ್ಯಕರ್ತರನ್ನು ಗೊಂದಲಕ್ಕೆ ಈಡುಮಾಡುವ ಕೆಲಸಕ್ಕೆ ಯಾರಾದರೂ ಕೈ ಹಾಕಿದ್ದಲ್ಲಿ, ನಾವು ಸುಮ್ಮನಿರುದಿಲ್ಲ ಏನ್ನುವ ಎಚ್ಚರಿಕೆ ನೀಡಿದ್ದು, ಅವರಿಗೆ ಮಾಡ್ಬೇಕು ಅದನ್ನು ನಾವು ಮಾಡ್ತೇವೆ ಎಂದಿದ್ದಾರೆ.
ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಭಾರತೀಯ ಜನತಾ ಪಾರ್ಟಿಗೆ ಶಕ್ತಿ ಇದೆ. ಆದರೆ, ಸುಮ್ಮನೆ ನಮ್ಮ ಕಾರ್ಯಕರ್ತರನ್ನು ಕೆಣಕುವಂತಹ, ನಮ್ಮ ಓಟಿಗೆ ಕೈ ಹಾಕುವ ಪ್ರಯತ್ನ ಯಾರಾದರೂ ಮಾಡಿದ್ರೆ ಅದಕ್ಕೆ ಉತ್ತರ ಕೊಡಬೇಕಾಗುತ್ತದೆ. ದ.ಕ ಜಿಲ್ಲೆಯ ಯಾವುದೇ ಚುನಾವಣೆಯಾದರೂ ಮತದಾನ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಬೇರೆ ಎಲ್ಲಾ ಭಾಗಗಳಿಗಿಂತ ವ್ಯವಸ್ಥಿತವಾಗಿ ಚುನಾವಣೆ ನಡೆಯುತ್ತಿತ್ತು.
ಆದರೆ, ಈ ಚುನಾವಣೆಯಲ್ಲಿ ಆ ರೀತಿಯ ಆಮಿಷಗಳು ನಡೆಯುವ ವಿದ್ಯಮಾನಗಳು ಇದೆ. ನಮಗೆ ಆತ್ಮ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ನಮ್ಮ ಓಟರ್ಸ್ ಇಂತಹ ಆಮಿಷಗಳಿಗೆ ಬಲಿ ಆಗುದಿಲ್ಲ ಎಂದಿದ್ದಾರೆ.