ಮಂಗಳೂರು, ನ.15 (DaijiworldNews/HR): ಬಲ್ಲಾಳ್ಬಾಗ್ನಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ಯುವಕರನ್ನು ಬಿರುವೆರ್ ಕುಡ್ಲ ಬೆಂಬಲಿಸುತ್ತದೆ ಎಂಬ ಶರಣ್ ಪಂಪ್ವೆಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿರುವೆರ್ ಕುಡ್ಲ, ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ಗೆ ಮುಸ್ಲಿಂ ಸಮುದಾಯದಿಂದ ಹಣ ಬೇಕು ಆದರೆ ಅವರಿಗೆ ಅವರ ಯುವಕರ ಅಗತ್ಯವಿಲ್ಲ" ಎಂದು ಹೇಳಿದೆ.
ಬಿರುವೆರ್ ಕುಡ್ಲದ ಸಂಚಾಲಕ ಲಕ್ಷ್ಮೀಶ್ ಮಾತನಾಡಿ, ಬಿರುವೆರ್ ಕುಡ್ಲ ಸಮಾಜ ಸೇವೆಯ ದೃಷ್ಟಿಯಿಂದ ರೂಪುಗೊಂಡಿದ್ದು, ಕಳೆದ ಏಳು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆದರೆ ಶರಣ್ ಪಂಪ್ವೆಲ್ ಅವರು ಬಿರುವೆರ್ ಕುಡ್ಲ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು, ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇವೆ" ಎಂದರು.
ಬಿರುವೆರ್ ಕುಡ್ಲದ ದೀಪು ಶೆಟ್ಟಿಗಾರ್ ಮಾತನಾಡಿ, ಶರಣ್ ಪಂಪ್ ವೆಲ್ ಮುಸ್ಲಿಂ ಸಂಘಟನೆಗಳ ಮೂಲಕ ಸಾಕಷ್ಟು ಹಣ ಸಂಪಾದಿಸಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಹೋರಾಡುವ ಶರಣ್ ಪಂಪ್ವೆಲ್ಗೆ ಮುಸ್ಲಿಮರಿಂದ ಹಣ ಬೇಕು, ಆದರೆ ಅವರ ಯುವಕರ ಅಗತ್ಯವಿಲ್ಲ. ಬಿರುವೆರ್ ಕುಡ್ಲ ಹಲವಾರು ವರ್ಷಗಳಿಂದ ನಿರ್ಗತಿಕರಿಗೆ ಸಹಾಯ ಮಾಡುತ್ತಿದೆ ಮತ್ತು ಬಲ್ಲಾಲ್ಬಾಗ್ನಲ್ಲಿ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದೆ" ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿರುವೆರ್ ಕುಡ್ಲದ ಉದಯ ಪೂಜಾರಿ, ಕಿಶೋರ್ ಬಾಬು, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.