ಕಾಸರಗೋಡು, ನ.15 (DaijiworldNews/HR): ನಿಲ್ಲಿಸಿದ್ದ ಸ್ಕೂಟರ್ ಹಾಗೂ ಅದರಲ್ಲಿದ್ದ 50 ಸಾವಿರ ರೂ. ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಣ್ಣೂರು ಇರಿಟ್ಟಿ ವಿಕಾಸ್ ನಗರದ ಕೆ.ಕೆ ವಿನೀಶ್ (30) ಎಂದು ಗುರುತಿಸಲಾಗಿದೆ.
ನವಂಬರ್ ಏಳರಂದು ಕೂಡ್ಲು ವಿನ ಶಾಫಿಂಗ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಿಲುಗಡೆಗೊಳಿಸಲಾಗಿದ್ದ ರಾಜೇಶ್ ಎಂಬವರ ಸ್ಕೂಟರ್ ಕಳವು ಮಾಡಲಾಗಿತ್ತು. ರಾಜೇಶ್ ಅವರ ದೂರಿನಂತೆ ಕಾಸರಗೋಡು ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು.
ತನಿಖೆ ನಡೆಸಿದ್ದ ಪೊಲೀಸರು ಎರಡು ದಿನಗಳ ಬಳಿಕ ಸ್ಕೂಟರ್ ನಗರದ ಬಳಿಕ ಪತ್ತೆಯಾಗಿತ್ತು. ಆದರೆ ಅದರಲ್ಲಿದ್ದ 50 ಸಾವಿರ ರೂ.ವನ್ನು ಕಳವು ಮಾಡಲಾಗಿತ್ತು.