ಉಡುಪಿ, ನ 15 (DaijiworldNews/MS): ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಆದರೆ ಪಕ್ಷಕ್ಕೆ ಬರುವುದಕ್ಕೆ ವಿರೋಧವಿಲ್ಲ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಹೇಳಿದ್ದಾರೆ.
ಅವರು ಇಂದು ಕಿದಿಯೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ನಡೆಸಿದ ಸಂದರ್ಭ " ಪೇಜಾವರ ಸ್ವಾಮಿಗಳಿಗೆ ದೊರಕಿದ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿಯ ಸ್ವಾಗತ ಕಾರ್ಯಕ್ರಮದಲ್ಲಿ, ಮಾಜಿ ಶಾಸಕ ಪ್ರಮೋದ್ ರು ಪ್ರಶಸ್ತಿ ಆಯ್ಕೆಯ ಬಗ್ಗೆ ವೇದಿಕೆಯಲ್ಲಿ ಮೋದಿಯವನ್ನ ಬಹಿರಂಗವಾಗಿ ಹೊಗಳಿದ ಕುರಿತ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಕುಯಿಲಾಡಿ, " ಪ್ರಮೋದ್ ಮದ್ವರಾಜ್ ಪ್ರಧಾನಿ ಮೋದಿಯವರನ್ನ ಹೊಗಳಿರುವ ಸುದ್ಧಿ ಮಾಧ್ಯಮಗಳಿಂದ ತಿಳಿದಿದ್ದೇನೆ. ಕೊನೆಗೂ ಅವರು ಬಿಜೆಪಿ ಪಕ್ಷದ ಮತ್ತು ನಾಯಕರ ಒಳ್ಳೆಯ ವಿಚಾರಗಳನ್ನ ಸ್ವೀಕಾರ ಮಾಡಲು ಶುರು ಮಾಡಿದ್ದಾರೆ. ಇದು ಒಳ್ಳೆಯ ವಿಚಾರ. ಬಿಜೆಪಿಗೆ ಬರುತ್ತಾರೋ ಇಲ್ಲವೋ ಅಂತ ಅವರು ಆಲೋಚನೆ ಮಾಡಬೇಕಾಗಿದೆ. ಅವರು ಬರುವಾಗ ಬರಬೇಕೋ ಬೇಡವೂ ಅಂತ ನಾವು ಆಲೋಚನೆ ಮಾಡುತ್ತೇವೆ. ಏಕೆಂದರೆ ನಮಗೆ ಈ ಹಿಂದೆ ಅನುಭವ ಆಗಿದ್ದು ದನ ಬಂದರೆ, ಕರು ಬರುತ್ತೇನೆ ಅಂದಿದ್ದರು. ಹೀಗಾಗಿ ಅವರ ಮಾನಸಿಕತೆ ಗೊತ್ತಾಗ್ತಿಲ್ಲ.ನಮ್ಮ ಪಕ್ಷ ಸಿದ್ದಾಂತವನ್ನು ಒಪ್ಪಿ ಬರುವುದಾದರೆ ನಾವು ಸ್ವಾಗತ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಆದರೆ ಅವರ ನಿಲುವುಗಳಲ್ಲಿ ಪದೇ ಪದೇ ಬದಲಾವಣೆ ಆಗುತ್ತಿದ್ದರೆ ನಾವೇನು ಮಾಡಲು ಸಾಧ್ಯವಿಲ್ಲ. ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕಿದ್ದರೆ, ಸ್ಥಳಿಯ ಕಾರ್ಯಕರ್ತರಲ್ಲಿ, ಸ್ಥಳೀಯ ನಾಯಕರಲ್ಲಿ ಚರ್ಚೆ ಮಾಡಬೇಕು. ಹಾಗೆ ಏಕಾಏಕಿ ಬರಮಾಡಿಕೊಳ್ಳಲು ಆಗುವುದಿಲ್ಲ. ನಮ್ಮ ಕಾರ್ಯಕರ್ತರೂ ಅವರಿಗೆ ಬೇಜಾರು ಮಾಡಿರಬಹುದು, ಆದರೆ ಪಕ್ಷಕ್ಕೆ ಬರುವುದಕ್ಕೆ ವಿರೋಧವಿಲ್ಲ. ನಮ್ಮ ವರಿಷ್ಠರು ನಿರ್ಧಾರವಾಗಬೇಕು. ಎಲ್ಲವೂ ಚರ್ಚೆ ಆಗಬೇಕು ಎಂದು ಹೇಳಿದ್ದಾರೆ