ಬೆಳ್ತಂಗಡಿ, ನ.15 (DaijiworldNews/HR): ಕೊಕ್ಕಡ ಸಮೀಪದ ಪೆರಿಯಶಾಂತಿ ಎಂಬಲ್ಲಿ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಶ್ರೀ ಧರ್ಮಸ್ಥಳ ಶೌರ್ಯ ತಂಡದ ಸ್ವಯಂ ಸೇವಕರು ರಕ್ಷಿಸಿದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಭಾನುವಾರ ಸಂಜೆ ನಿಡ್ಲೆ ಮೂಲದ ವ್ಯಕ್ತಿಯೊಬ್ಬರು ತಮ್ಮ ಸ್ಕೂಟರ್ನಲ್ಲಿ ಪೆರಿಯಶಾಂತಿ ಮಾರ್ಗವಾಗಿ ನಿಡ್ಲೆಗೆ ಹೋಗುತ್ತಿದ್ದ ವೇಳೆ ಜೋರಾಗಿ ಮಳೆ ಸುರಿದಿದ್ದು, ನೀರು ರಸ್ತೆಯಲ್ಲಿ ತುಂಬಿ ನೀರಿನ ರಭಸಕ್ಕೆ ಸ್ಕೂಟರ್ನೊಂದಿಗೆ ವ್ಯಕ್ತಿ ಕಮರಿಗೆ ಬಿದ್ದಿದ್ದಾರೆ. ಆಗ ಅದೇ ಸ್ಥಳದಿಂದ ಹಾದು ಹೋಗುತ್ತಿದ್ದ ತಂಡದ ಸ್ವಯಂಸೇವಕರು ತಕ್ಷಣ ಕಾರ್ಯಪ್ರವೃತ್ತರಾಗಿ ವಾಹನ ಸಮೇತ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಭಾನುವಾರ ಮಧ್ಯಾಹ್ನದಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ.