ಉಡುಪಿ, ನ.15 (DaijiworldNews/HR): ಸಂಗೀತ ನಿರ್ದೇಶಕ ಹಂಸಲೇಖ ಅವರು ದಲಿತರ ಮನೆಯಲ್ಲಿ ಪೇಜಾವರ ಶ್ರೀ ವಾಸ್ತವ್ಯದ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವಪ್ರಸನ್ನ ಶ್ರೀಗಳು, ಹಂಸಲೇಖ ಬಾಯಲ್ಲಿ ಇಂತಹ ಮಾತುಗಳು ಬರಬಾರದಿತ್ತು. ಪ್ರಚಾರಕ್ಕಾಗಿ ಸಾಕಷ್ಟು ಜನರು ಹೀಗೆ ಮಾತನಾಡುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನನ್ನ ಗುರುಗಳು ಎಲ್ಲರ ಹೃದಯದಲ್ಲಿ ಕೃಷ್ಣನನ್ನು ಕಂಡವರು. ಆದ್ದರಿಂದ ಅವರು ದಲಿತರ ಕೇರಿಗೂ ಹೋಗುತ್ತಿದ್ದರು. ಸಮಾಜದ ಎಲ್ಲರ ಉದ್ದಾರವನ್ನು ವಿಶ್ವೇಶ್ವರ ತೀರ್ಥರು ಬಯಸಿದ್ದರು. ನಮ್ಮ ಉದ್ದೇಶ ಪ್ರಾಮಾಣಿಕವಾಗಿದ್ದರೆ ಸಾಕು. ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲುವುದಿಲ್ಲ" ಎಂದರು.
ಇನ್ನು ಶ್ರೀಕೃಷ್ಣನಿಗೆ ಅಗ್ರ ಪೂಜೆ ನೀಡುವಾಗ ಶಿಶುಪಾಲ ವಿರೋಧಿಸಿದ್ದ. ಆ ಕೃಷ್ಣನೇ ಬೇಕಾದ ಪ್ರತೀಕಾರ ಮಾಡುತ್ತಾನೆ. ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಮಾಡಿದ್ದ.ಯಾರ ಹೊಗಳಿಕೆಗಾಗಿ ನಾವು ಈ ಕೆಲಸ ಮಾಡಿದ್ದಲ್ಲ. ಐಕ್ಯ ಸಂದೇಶ ನೀಡುವುದಕ್ಕಾಗಿ ನಮ್ಮ ಕಾರ್ಯಕ್ರಮಗಳು ನಡೆಯುತ್ತವೆ" ಎಂದಿದ್ದಾರೆ.
"ಆಹಾರ ನಿಯಮದಲ್ಲಿ ಎಲ್ಲರಿಗು ಸ್ವಾತಂತ್ರ್ಯವಿದೆ. ಒಬ್ಬರ ಆಹಾರ ನಿಯಮವನ್ನು ಮತ್ತೊಬ್ಬರ ಮೇಲೆ ಹೇರೋದು ಅದು ಯಾರು ಯಾರ ಮೇಲೆ ಮಾಡಬಾರದು. ಒಬ್ಬರಂತೆ ಇನ್ನೊಬ್ಬರು ಅಂತಹದ್ದೇ ಆಹಾರ ತಿಂದರೆ ಉದ್ಧಾರ ಆಗುತ್ತೆ ಅನ್ನೋದು ತಪ್ಪು . ಅವರ ಮಾತು ಅವರ ಸಣ್ಣತನವನ್ನು ಜಗತ್ತಿನ ಮುಂದೆ ತೋರಿಸಿದೆ . ಇಂತಹದ್ದು ನಡಿಬಾರದಿತ್ತು" ಎಂದು ಹೇಳಿದ್ದಾರೆ.