ಕಾರ್ಕಳ, ನ.14 (DaijiworldNews/HR): ದೇಶದ ಪ್ರತಿಯೊಬ್ಬರು ಹುಟ್ಟಿನಿಂದ ಅಂತ್ಯದ ವರೆಗೆ ಕೆಲವೊಂದು ಅಗತ್ಯ ದಾಖಲೆ ಪತ್ರಗಳಿಗಾಗಿ ಕಾನೂನು ಅರಿವು ಅಗತ್ಯವಾಗಿದೆ. ಶಿಕ್ಷಣ, ಆರೋಗ್ಯ, ರಕ್ಷಣೆ ಸೇರಿದಂತೆ ಮೂಲ ಸೌಕರ್ಯಗಳು ಮಕ್ಕಳಿಗೆ ಸಂವಿಧಾನ ನೀಡಿದ ಹಕ್ಕು ಆಗಿದೆ. ಬಾಲ್ಯ ವಿವಾಹ ದೇಶಕ್ಕೆ ಅನಿಷ್ಠ ಪದ್ಧತಿ. ಅದು ಇನ್ನೂ ಕೆಲವೊಂದು ಪ್ರದೇಶದಲ್ಲಿ ಮುಂದುವರಿಯುತ್ತಿದೆ. ಬಡತನ, ಅನರಕ್ಷತೆ,ಮೂಢನಂಬಿಕೆಗಳಿಂದಾಗಿ ಬಾಲ್ಯ ವಿವಾಹ ನಡೆಯುತ್ತಿದೆ. ಇದರಿಂದ ಮಾನಸಿಕ,ದೈಹಿಕ ತೊಂದರೆಗಳು ಹೆಚ್ಚಾಗಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಯುವ ಕಾನೂನುಗಳಿದ್ದರೂ, ಶಿಕ್ಷಣ ಮತ್ತು ಅರಿವಿನ ಕೊರತೆಗೆ ಕಾರಣವಾಗಿದೆ. ಉತ್ತಮ ಶಿಕ್ಷಣ ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷೆ ರೂಪಾಶ್ರೀ ಹೇಳಿದ್ದಾರೆ.
ಗಾಂಧಿ ಜಯಂತಿಯಿಂದ ಮಕ್ಕಳ ದಿನಾಚರಣೆಯ ತನಕ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ನಗರದ ಎಸ್ವಿಟಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಉಚಿತ ಕಾನೂನು ಅರಿವು ನೆರವು ಮಾಹಿತಿ ಕಾರ್ಯಕ್ರಮವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.
ಕಾರ್ಕಳ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಕಾರ್ಕಳ, ಕ್ಷೇತ್ರ ಶಿಕ್ಷಣಾಧಿಕಾರಿ, ಎಸ್.ವಿ.ಟಿ. ಪ್ರೌಢಶಾಲೆ ಕಾರ್ಕಳ ಇದರ ಜಂಟೀ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಯಿತು.
ಪ್ರಧಾನ ಸಿವಿಲ್ನ್ಯಾಯಾಧೀಶರು ಹಾಗೂ ಕಾರ್ಕಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಚೇತನಾ ಎಸ್.ಎಫ್ ಮಾತನಾಡಿ, ಉತ್ತಮ ಸಮಾಜ ರೂಪುಗೊಳ್ಳಲು ಮಕ್ಕಳಿಗೆ ಕಾನೂನು ಅರಿವು ಅಗತ್ಯ. ಮನುಷ್ಯನ ಜೀವನ ತನ್ನಂದಿ ತಾನೇ ಬೆಳೆಯುವ ಕಾಡಿನ ಗಿಡಮರಗಳಂರತಲ್ಲ. ಮನುಷ್ಯನ ಬದುಕಿಗೆ ಶಿಸ್ತು, ಕಾನೂನು ಚೌಕಟ್ಟಿನ ಬದ್ಧತೆ ಇದೆ. ಆನೇಕ ಅಪರಾಧಗಳಿಗೆ ಕಾನೂನಿಗೆ ಮಾಹಿತಿಯ ಕೊರತೆ ಜೊತೆಗೆ ಶಿಕ್ಷಣದ ಮಹತ್ವ ತಿಳಿಯದೇ ಇರುವುದು ಕಾರಣ" ಎಂದರು.
ಕಾರ್ಕಳ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುನೀಲ್ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, "ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ದೇಶ ಮೊದಲ ಪ್ರಧಾನಿ ನೆಹರು ಅವರ ಕೊಡುಗೆ ಅಪಾರವಾಗಿದೆ. ಕಾನೂನನ್ನು ಔಷಧಿಯಂತೆ ಬಳಸಬೇಕು. ಅದನ್ನು ವಿಷವೆಂದು ಪರಿಗಣಿಸಬಾರದು. ಸಮಾಜದಲ್ಲಿ ಹೆಣ್ಣುಮಕ್ಕಳು ಪ್ರಬಲ ಶಕ್ತಿಯಾಗಿ ದೇಶವನ್ನೇ ಮುನ್ನೆಡುಸುತ್ತಾರೆ" ಎಂದಿದ್ದಾರೆ.
ನ್ಯಾಯಾವಾದಿಗಳ ಸಂಘದ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್, ಸಂಪನ್ಮೂಲ ವ್ಯಕ್ತಿಯಾಗಿ ಪ್ಯಾನಲ್ ವಕೀಲೆ ಮುಕ್ತ ಉಪಸ್ಥಿತರಿದ್ದರು.