ಕಾರ್ಕಳ, ನ.13 (DaijiworldNews/HR): ಬಿಟ್ಕಾಯಿನ್ ವಿವಾದವು ಕಾಂಗ್ರೆಸ್ನ ಕದ ತಟ್ಟುತ್ತಿದೆ. ಹೊಸ ಹೊಸ ವಿವಾದ ಹುಟ್ಟು ಹಾಕುವುದೇ ಕಾಂಗ್ರೆಸ್ ಜಯಾಮಾನ. ಗಾಳಿ ಹಾರಿಸಿ ಸದ್ದು ಮಾಡುವುದು ಅವರ ಉದ್ದೇಶ ಹೊರತು ಗುರಿ ಅಲ್ಲ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ಕುಮಾರ್ ಆರೋಪಿಸಿದ್ದಾರೆ.
ಕಾರ್ಕಳದ ವಿಕಾಸ ಸೇವಾ ಸಂಸ್ಥೆಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿನಾಕಾರಣ ಕಾಂಗ್ರೆಸ್ಸಿನ ಪ್ರಥಮ ಮತ್ತು ದ್ವಿತೀಯ ಹಂತದ ನಾಯಕರು ಸರಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಜನರ ಮನಸ್ಸನ್ನು ಬೇರೆಕಡೆ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ 2018 ಮತ್ತು 2019ರ ತನಕ ರಾಜ್ಯದ ಐಟಿ-ಬಿಟಿ ಸಚಿವರು ಯಾರಾಗಿದ್ದರು? ಹಗರಣವಾದ ಸಮಯದಲ್ಲಿ ಅವರು ಏನು ಮಾಡುತ್ತಿದ್ದರು? ಈಗ ಅವರ ಮಯ ಕದ ತಟ್ಟಿದೆ. 2015 ರಿಂದ 17 ರ ಅವಧಿಯಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರದಲ್ಲಿತ್ತು. ಅದೇ ಸಂದರ್ಭದಲ್ಲಿ ಈ ವಿಚಾರ ತಿಳಿದರೂ ಯಾಕೆ ಗಮನ ಹರಿಸಿಲ್ಲ? ಅಂದು ಗೊತ್ತಿದ್ದೂ ಯಾಕೆ ಮುಚ್ಚಿಟ್ಟುಕೊಳ್ಳಲು ಕೊಂಡರು? ಎಂದು ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದ್ದಾರೆ.
ಹೊಸ ಹೊಸ ಹಗರಣಗಳು ತಮ್ಮ ಮನೆಯ ಕದವನ್ನು ತಟ್ಟುದಾಗ ಅದನ್ನು ಬಿಜೆಪಿಯತ್ತ ಬೊಟ್ಟು ಮಾಡಿಸಿದ್ದಾರೆ. ತನಿಗೂ ಯೂತ್ ಕಾಂಗ್ರೆಸ್ಸಿಗರೂ ಇರುವ ನಂಟೇನು? 2018ರಲ್ಲಿ ಹಗರಣದ ಸೂತ್ರಧಾರನನ್ನು ಯಾಕೆ ಬಂಧಿಸಿಲ್ಲ. ಆತನಿಗೆ ರಕ್ಷಣೆ ನೀಡಿರುವುದು ಅಂದಿನ ಕಾಂಗ್ರೆಸ್ ಹೊರತು ಇಂದಿನ ಬಿಜೆಪಿ ಸರಕಾರವಲ್ಲ ಎಂದರು.
ಜವಾಬ್ದಾರಿಯುತ ನಾಯಕರು ಹಣಕಾಸಿನ ಆರೋಪ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕು. ಆಧಾರರಹಿತವಾದ ಯಾವುದೇ ಆರೋಪಿಗಳನ್ನು ಮಾಡುವುದು ತರವಲ್ಲ. ಇಂತಹದೇ ಆರೋಪವು ಕಾಂಗ್ರೆಸ್ ಪಕ್ಷ ರಾಷ್ಟ್ರ ನಾಯಕ ರಾಹುಲ್ ಗಾಂಧಿಯವರು ಮಾಡಿರುವ ಕುರಿತು ಉಲ್ಲೇಖಿಸಿದ ಸುನೀಲ್, ರಫೆಲ್ ಯುದ್ಧ ವಿಮಾನದ ಕುರಿತಂತೆ ರಾಹುಲ್ ಮಾಡಿದ ಆರೋಪ
ಕಾಂಗ್ರೆಸ್ಗೆ ತಿರುಗುಬಾಣವಾಗಿದೆ. ಗಾಳಿಯಲ್ಲಿ ಹಾರಿಸುವುದು ರಾಹುಲ್ಗಾಂಧಿಯ ಪಾಕಸಾಲೆಯಲ್ಲಿ ಇರುವುವರಿಗೆ ಚೆನ್ನಾಗಿ ಗೊತ್ತಿದೆ. ಅದರಿಂದ ಶಬ್ದ ಮಾತ್ರ ಹೊರಬರುತ್ತಿದೆ. ಗುರಿ ತಲುಪಲು ವಿಫಲವಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರಕಾರ ಉತ್ತಮ ಸಾಧನೆಗೈದಿದೆ. ಕಡಿಮೆ ಅವಧಿಯಲ್ಲಿ ಸರಕಾರದ ಸಾಧನೆಗಳು ಹೆಚ್ಚಿನ ಜನರ ಮನಮುಟ್ಟಿದೆ. ತನ್ಮೂಲಕ ಮುಖ್ಯಮಂತ್ರಿ ಜನಪ್ರಿಯರಾಗಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ಕಾಂಗ್ರೆಸ್ಸಿಗರು ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದರಿಂದ ಸರಕಾರದ ವರ್ಚಸ್ಸಿ ದಕ್ಕೆಯಾಗದು.
ಮಾಜಿಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರಿಗೆ ತನ್ನದೇ ಪಕ್ಷದ ಮುಖಂಡರಾದ ಡಿಕೆಸಿ, ಪರಮೇಶ್ವರ, ಖರ್ಗೆ ಸೇರಿದಂತೆ ಇತರ ಮುಖಂಡರ ಮೇಲೆಯೇ ಅನುಮಾನ ಹುತ್ತ ಅವರಾದಾಗಿದೆ. ಆಗಿರುವಾಗ ಬಿಜೆಪಿಯವರ ಮೇಲೆ ಅವರಿಗೆ ಅನುಮಾನ ಸಹಜವೆಂದರು. ಕಾಂಗ್ರೆಸ್ ಆಧಾರರಹಿತ ಆರೋಪ ಬಿಟ್ಟು ರಚನಾತ್ಮಕ ಕಾರ್ಯಕ್ರಮ ಕೈಗೊಳ್ಳಲಿ ಎಂದರು.
ಸುರತ್ಕಲ್ ಸರ್ಕಲ್ಗೆ ವೀರ ಸವಾರ್ಕರ್ ಹೆಸರನ್ನು ಇಟ್ಟಿರುವ ಕುರಿತು ಮಾತನಾಡಿದ ಸಚಿವ ವಿ.ಸುನೀಲ್ ಕುಮಾರ್, ಸಾವರ್ಕರ್ ಕುರಿತು ಮಾತನಾಡುವ ನೈತಿಕತೆ ಖಾದರ್ಗಿಲ್ಲ. ಸಾರ್ವಕರ್ ನಮ್ಮ ಸ್ವಾಭಿಮಾನ, ಹೋರಾಟ, ಪ್ರೇರಣೆಯ ಸಂಕೇತ. ಖಾದರ್ ಅವರು ಸಾವರ್ಕರ್ ಕುರಿತು ಮಾತಾಡುವ ದೊಡ್ಡ ವ್ಯಕ್ತಿತ್ವ ಅವರದಲ್ಲ. ಗೋಕಳ್ಳರನ್ನು ಬಿಡಿಸುವರಿಗೆ ಅಂಡಮಾನ್ ಜೈಲಿನ ಮಹತ್ವ ಏನೆಂದು ತಿಳಿಯಬಹುದು ಎಂದು ಹೇಳಿದ್ದಾರೆ.