ಕಾರ್ಕಳ, ನ.12 (DaijiworldNews/PY): "ವಿದ್ಯಾರ್ಥಿಗಳು ಎಳವೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸಮಾಜದ ಸ್ವಚ್ಛತೆ ಮತ್ತು ಸ್ವಾಸ್ಥ್ಯವನ್ನು ಕಾಪಾಡಲು ಶ್ರಮಿಸಬೇಕು. ಒಳ್ಳೆಯ ಸಾಧನೆ ಮಾಡಿ ಹೆಸರುಗಳಿಸಿ ಸಮಾಜಕ್ಕೆ ಮಾದರಿ ಎನ್ನಿಸಿಕೊಳ್ಳಬೇಕು" ಎಂದು ರೋಟರಿ ಜಿಲ್ಲೆ3182ರ ಇಂರ್ಯಾಕ್ಟ್ ಕ್ಲಬ್ನ ಜಿಲ್ಲಾಧ್ಯಕ್ಷ ರೊ.ಜೈ ವಿಠ್ಠಲ್ ಹೇಳಿದರು.
ಕ್ರೈಸ್ಟ್ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಇಂರ್ಯಾಕ್ಟ್ ಕ್ಲಬ್ನ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಇಂರ್ಯಾಕ್ಟ್ ಕ್ಲಬ್ನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು.
ಕಾರ್ಕಳ ರೋಟರಿ ಕ್ಲಬ್ನ ಅಧ್ಯಕ್ಷ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ತಾಲೂಕು ರೋಟರಿ ಕ್ಲಬ್ನ ಕಾರ್ಯದರ್ಶಿ ಇಕ್ಬಾಲ್ ಅಹಮ್ಮದ್, ಕಾರ್ಕಳ ತಾಲೂಕು ಇಂರ್ಯಾಕ್ಟ್ ಅಧ್ಯಕ್ಷೆ ಹರ್ಷಿಣಿ ವಿಜಯರಾಜ್, ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಉಪಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರಾಥಮಿಕ ಶಾಲಾ ಮೂಖ್ಯೋಪಾಧ್ಯಾಯ ಮೇರಿಯನ್ ಡಿ’ಸೋಜ ಉಪಸ್ಥಿತರಿದ್ದರು.
ಶಾಲೆಯ ಇಂರ್ಯಾಕ್ಟ್ ಕ್ಲಬ್ನ ಅಧ್ಯಕ್ಷರಾಗಿ ನೇತನ್ ಪಿಂಟೊ, ಕಾರ್ಯದರ್ಶಿಯಾಗಿ ವಂದನಾ, ಖಜಾಂಚಿಯಾಗಿ ಸಮೃದ್ಧಿ, ಸರ್ಜೆಂಟ್ ಆರ್ಮ್ಸ್ ಆಗಿ ನವೀದ್ ಝಾವಿದ್ ಹುಸೈನ್, ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ಅಲ್ವಿನಿಯಾ ಡೆಸ, ವೊಕೇಷನಲ್ ಸರ್ವೀಸ್ ನಿರ್ದೇಶಕರಾಗಿ ಅನಘ, ಕಮ್ಯುನಿಟಿ ಸೇವಾ ನಿರ್ದೇಶಕರಾಗಿ ಆ್ಯನ್ಸ್ ಕುಮಾರ್, ಯುವ ಸೇವಾ ನಿರ್ದೇಶಕರಾಗಿ ವೈಭವ್ ಎಸ್ ಪ್ರಭು, ಅಂತಾರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ತೃಪ್ತಿ ಪಿ ಶೆಟ್ಟಿ ಆಯ್ಕೆಯಾದರು.
ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ ಸ್ವಾಗತಿಸಿದರು. ವಿದ್ಯಾರ್ಥಿನಿ ಅನಘ ಅತಿಥಿಗಳನ್ನು ಪರಿಚಯಿಸಿದರು. ಅಲ್ವಿನಿಯಾ ಡೆಸ ಕಾರ್ಯಕ್ರಮ ನಿರೂಪಿಸಿದರು. ವಂದನಾ ವಂದಿಸಿದರು.