ಮಂಗಳೂರು, ನ.12 (DaijiworldNews/PY): ಮಂಗಳೂರಿನ ದಿಯಾ ಸಿಸ್ಟಮ್ಸ್ ಪ್ರೈ. ಲಿಮಿಟೆಡ್ ಸ್ಥಾಪಕ ಡಾ. ರವಿಚಂದ್ರನ್ ಅವರು ಶುಕ್ರವಾರ ನಿಧನರಾದರು.
ಮಂಗಳೂರು ಮೂಲದ ಡಾ. ರವಿಚಂದ್ರನ್ ಅವರು ಎರಡು ವರ್ಷದ ಹಿಂದೆ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇವರು ಅಮೇರಿಕಾದ ಕೆಂಟಕಿಯಲ್ಲಿರುವ ತನ್ನ ಮಗಳ ಮನೆಯಲ್ಲಿ ನಿಧನರಾದರು.
ಇವರು ತಾಂತ್ರಿಕತೆಯ ಉದ್ಯಮದ ಓರ್ವ ಯಶಸ್ವಿ ಉದ್ಯಮಿಯಾಗಿದ್ದರು. ಇವರ ಸಾಧನೆಗೆ ಭಾರತೀಯ ಉದ್ಯೋಗ ರತ್ನ ಅವಾರ್ಡ್, ಅಲೋಷಿಯನ್ ಅಲ್ಯುಮಿನಿ ಅವಾರ್ಡ್, ಎಂಎಂಎ-ಕೆವಿಕೆ ಅತ್ಯುತ್ತಮ ಮ್ಯಾನೇಜರ್ ಅವಾರ್ಡ್, 2016ರ ಸ್ಪಂದನ ಎಂಟರ್ಪ್ರಿನರ್ ಆಫ್ ದಿ ಇಯರ್ ಪ್ರಶಸ್ತಿಗಳು ಬಂದಿದ್ದವು.
ರವಿಚಂದ್ರನ್ ಅವರು ಪತ್ನಿ ಇಂದಿರಾ, ಪುತ್ರಿ ವಿದ್ಯಾ ಹಾಗೂ ಪುತ್ರ ಹರಿ ಅವರನ್ನು ಅಗಲಿದ್ದಾರೆ.