ಮಂಗಳೂರು, ನ.12 (DaijiworldNews/PY): ಮಣ್ಣಗುಡ್ಡ ಪರಿಸರದ ಗಾಂಧಿನಗರ 5ನೇ ಕ್ರಾಸ್ನಲ್ಲಿರುವ ಎರಡು ಮನೆಗಳಿಗೆ ಕಳ್ಳರು ನುಗ್ಗಿ10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ನ.9ರ ಮಂಗಳವಾರ ರಾತ್ರಿ ನಡೆದಿದೆ.
ಕಳ್ಳರು, ಮಣ್ಣಗುಡ್ಡೆಯ ಲಕ್ಷ್ಮಣ್ ಕಾಮತ್ ಅವರ ಮನೆಯ 1ನೇ ಮಹಡಿಗೆ ತೆರಳಿದ್ದು, ಮನೆಯ ದಕ್ಷಿಣ ಬಾಗಿಲಿನಿಂದ ಒಳ ಪ್ರವೇಶಿಸಿ ಸುಮಾರು 6.74 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಣ್ಣಗುಡ್ಡ ನಿವಾಸಿ ರಾಮಚಂದ್ರ ಭಂಡಾರಿ ಅವರ ಮನೆಯ ಹಿಂಬಾಗಿಲನ್ನು ಮುರಿದು 3.86 ಲಕ್ಷ ರೂ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ.
ಘಟನೆಯ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.